ರಸ್ತೆ ಅಗಲೀಕರಣ ನೆಪದಲ್ಲಿ ಜನರನ್ನ ದಿವಾಳಿ ಮಾಡಿದ – ಪಿ.ಡಿ.ಓ ನಾಗಭೂಷಣ, ಇ.ಓ ಖಾಲಿದ್ ಅಹ್ಮದ್.
ಮಾನ್ವಿ ಮಾ.23

ರಸ್ತೆ ಅಗಲೀಕರಣ ಮಾಡಿ ಹರನಹಳ್ಳಿ ಗ್ರಾಮವನ್ನು ಅಭಿವೃದ್ಧಿ ಮಾಡುತ್ತೇವೆಂದು ಪಿ.ಡಿ.ಓ ನಾಗಭೂಷಣ ಹಾಗೂ ತಾಲೂಕ ಪಂಚಾಯತಿ ಇ.ಓ ಖಾಲಿದ್ ಅಹ್ಮದ್ ಜನರಿಗೆ ಸುಳ್ಳು ಭರವಸೆ ಕೊಟ್ಟು ಗ್ರಾಮಸ್ಥರನ್ನು ದಿವಾಳಿ ಸ್ಥಿತಿಯಲ್ಲಿ ಇಟ್ಟಿರುವುದು ಬೆಳಕಿಗೆ ಬಂದಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹರನಹಳ್ಳಿ ಗ್ರಾಮ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಶಾಸಕ ಬಸನಗೌಡ ದದ್ದಲ್ ಸಾಹೇಬ್ರೆ ನೋಡಿ ಸ್ವಾಮಿ.ಜನರು ಮನೆಗಳನ್ನು ಕಳೆದು ಕೊಂಡಿರುವುದು ಒಂದಾದರೆ ಚರಂಡಿ ಇಲ್ಲದೆ ದುರ್ನಾತದ ಮಧ್ಯೆ ಬದುಕುವಂತಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಂಕೇಶ್ವರ ಗ್ರಾಮ ಪಂಚಾಯತಿ ಪಿ.ಡಿ.ಓ ತಾಲೂಕ ಪಂಚಾಯತಿ ಇ.ಓ ಖಾಲಿದ್ ಅಹ್ಮದ್ ಸಾಹೇಬ್ರೆ ಹರನಹಳ್ಳಿ ಗ್ರಾಮದ ಜನರು ಯಾವ ಸ್ಥಿತಿಯಲ್ಲಿ ಬದುಕುತ್ತಿದ್ದಾರೆಂದು ನೀವು ಒಂದು ದಿನವಾದರು ಇಲ್ಲಿ ಇದ್ದು ಜೀವನ ಕಳೆಯಿರಿ ನಿಮಗೆ ನಾಚಿಕೆಯಾಗುತ್ತದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ