ಜಿಲ್ಲಾ ಲೋಕಾಯುಕ್ತರು ಮತ್ತು ಅಬಕಾರಿ ಇಲಾಖೆಯ ಡಿ.ವಾಯ್.ಎಸ್.ಪಿ ಭೇಟಿ – ಸಾರಾಯಿ ನಿಷೇಧಕ್ಕೆ ಸೂಕ್ತ ಕ್ರಮಕ್ಕೆ ಆಗ್ರಹ, ನಾಗರಿಕ ಹಾಗೂ ಮೂಲಭೂತ ಸೌಕರ್ಯಕ್ಕೆ ಕತ್ತರಿ ಎಚ್ಚರಿಕೆ.
ಮಡಿಕೇಶ್ವರ ಮಾ.25

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮಡಿಕೆಶ್ವರ ಗ್ರಾಮಕ್ಕೆ ವಿಜಯಪುರ ಜಿಲ್ಲಾ ಲೋಕಾಯುಕ್ತರು ಮತ್ತು ಅಬಕಾರಿ ಇಲಾಖೆಯ ಡಿ.ವಾಯ್.ಎಸ್.ಪಿ ಬಸವನ ಬಾಗೇವಾಡಿ ಮತ್ತು ಸಿ.ಪಿ.ಐ ಮುದ್ದೇಬಿಹಾಳ ಸಿಬ್ಬಂದಿ ಮಡಿಕೇಶ್ವರ ಗ್ರಾಮಕ್ಕೆ ಭೇಟಿ ನೀಡಿದ್ದರು. ಮಡಿಕೇಶ್ವರ ಗ್ರಾಮದಲ್ಲಿ ಸರಾಯಿ ಮಾರಾಟವನ್ನು ನಿಷೇಧಿಸಲು ಎಲ್ಲರೂ ಕೈಜೋಡಿಸ ಬೇಕು ಗ್ರಾಮದ ಕಿರಾಣಿ ಅಂಗಡಿಗಳಲ್ಲಿ ಮತ್ತು ಹೋಟೆಲುಗಳಲ್ಲಿ ಸರಾಯಿ ಮಾರಾಟ ಮಾಡುವವರ ಮೇಲೆ ಗ್ರಾಮ ಪಂಚಾಯತಿ ಸಿಬ್ಬಂದಿ ಮತ್ತು ಸದಸ್ಯರು ನಿಗಾ ವಹಿಸಬೇಕು ಮತ್ತು ಕೆಲವು ಗ್ರಾಮೀಣ ವ್ಯಾಪ್ತಿಯ ಕಿರಾಣಿ ಅಂಗಡಿಗಳಲ್ಲಿ ಹಾಗೂ ಹೋಟೆಲುಗಳಲ್ಲಿ ಸರಾಯಿ ಮಾರಾಟ ಹೆಚ್ಚಾಗಿದೆ ಎಂದು ಕೇಳಿ ಬಂದಿದೆ ಅದಕ್ಕಾಗಿ ಜನರಿಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ ಗ್ರಾಮೀಣ ಪ್ರದೇಶದಲ್ಲಿ ಸರಾಯಿ ಮಾರಾಟ ಮಾಡುವುದಾಗಲಿ ಕಳ್ಳ ಬಟ್ಟಿ ಸರಾಯಿ ಮಾಡುವುದಾಗಲಿ ಮಾಡಿದರೆ ಇಂಥ ವ್ಯಕ್ತಿಗಳ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತಿ ಸದಸ್ಯರಿಗೆ ಸಭೆ ಕರೆದು ಸಭೆಯಲ್ಲಿ ಗ್ರಾಮದಲ್ಲಿ ಸರಾಯಿ ಮಾರಾಟ ನಿಷೇಧದ ಬಗ್ಗೆ ಚರ್ಚಿಸಬೇಕು ಮತ್ತು ಗ್ರಾಮ ಪಂಚಾಯಿತಿಯಲ್ಲಿ ಠರಾವು ಪಾಸ್ ಮಾಡಿ ಗ್ರಾಮದಲ್ಲಿ ಸರಾಯಿ ಮಾರಾಟಗಾರರಿಗೆ ನೋಟಿಸ್ ನೀಡಿ ಪೊಲೀಸ್ ಇಲಾಖೆಗೆ ಮತ್ತು (ಅಬಕಾರಿ ಇಲಾಖೆಗೆ ಗುಪ್ತವಾಗಿ ಮಾಹಿತಿ) ನೀಡಬೇಕು ಎಂದು ಸದಸ್ಯರಿಗೆ ಎಚ್ಚರಿಕೆ ನೀಡಿದರು. ಸಾರಾಯಿ ಮುಕ್ತ ಗ್ರಾಮ ಮಾಡಲು ಗ್ರಾಮ ಪಂಚಾಯತಿ ಸದಸ್ಯರು ಪಕ್ಷಾತೀತವಾಗಿ ಗ್ರಾಮದ ಒಳ್ಳೆಯ ಅಭಿವೃದ್ಧಿ ಮತ್ತು ಶಿಕ್ಷಣದ ಗೋಸ್ಕರ ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆ ಇವರ ಜೊತೆ ಕೈ ಜೋಡಿಸ ಬೇಕೆಂದರು. ಗ್ರಾಮದಲ್ಲಿ ಸಾರಾಯಿ ಮಾರಾಟ ಮಾಡುವವರು ನಿಲ್ಲಿಸದಿದ್ದರೆ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಮತ್ತು ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ರದ್ದು ಪಡಿಸಲಾಗುವುದು ಹಾಗೂ ಪಂಚಾಯಿತಿಯಲ್ಲಿ ಬರುವ ಯಾವುದೇ ಯೋಜನೆ ಆಗಲಿ ಅಂತವರಿಗೆ ನೀಡಲಾಗುವುದಿಲ್ಲ ಮತ್ತು ಅಂತವರ ರೇಷನ್ ಕಾರ್ಡ್ ರದ್ದು ಪಡಿಸಲಾಗುವುದು ಎಂದರು ಈ ಸಂದರ್ಭದಲ್ಲಿ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಅಬಕಾರಿ ಇಲಾಖೆ ಅಧಿಕಾರಿಗಳು ಪೊಲೀಸ್ ಇಲಾಖೆ ಅಧಿಕಾರಿಗಳು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರು ಗ್ರಾಮದ ಅನೇಕ ಗಣ್ಯರು ಗ್ರಾಮಸ್ಥರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ