ಯಲಗೋಡದಲ್ಲಿ ತೊಗರಿ ತುಂಬುವ ಯಂತ್ರ ಚಾಲನೆ ನೀಡಿದ – ಸಾಯಬಣ್ಣ ಬಾಗೇವಾಡಿ.

ಯಲಗೋಡ ಮಾ.30

ರೈತರು ಬಹು ದಿನಗಳ ಬೇಡಿಕೆಯಾದ ತೊಗರಿ ಖರೀದಿ ಕೇಂದ್ರವು ತೆರೆಯಬೇಕು ಎಂದು ರೈತರು ಅಧ್ಯಕ್ಷರಿಗೆ ಹೇಳಿದರು ಅವರ ಮಾತಿನಂತೆ ಅಧ್ಯಕ್ಷರು ನಡೆಸಿದ್ದಾರೆ. ಇನ್ನೂ ಸೊಸೈಟಿಯಲ್ಲಿ ಹಲವಾರು ಕೆಲಸಗಳ ಬಾಕಿ ಇವೆ ಅವು ಬರುತ್ತವೆ ಎಂದು ಸಂಘ ಅಧ್ಯಕ್ಷರಾದ ಸಾಯಬಣ್ಣ ಬಾಗೇವಾಡಿ ಹೇಳಿದರು.ದೇವರ ಹಿಪ್ಪರಗಿ ತಾಲೂಕಿನ ಯಲಗೋಡದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಇಂದು ತೊಗರಿ ಖರೀದಿ ಕೇಂದ್ರವನ್ನು ಸಂಘದ ಅಧ್ಯಕ್ಷರಾದ ಸಾಯಬಣ್ಣ ಬಾಗೇವಾಡಿಯವರು ಉದ್ಘಾಟನೆ ಮಾಡಿ ಮಾತಾನಾಡಿದರು.

ಈ ಕಾರ್ಯಕ್ರಮದ ಚಾಲನೆ ನೀಡಿದ ಶ್ರೀ ನಿಂಗಯ್ಯಮಹಾ ಸ್ವಾಮಿಗಳು ಹಾಗೂ ರಾಜಶೇಖರ ಸ್ವಾಮಿಗಳು ಹಾಗೂ ಸೊಸೈಟಿಯ ನಿರ್ದೇಶಕರಾದ ರಾಜುಗೌಡ ಪಾಟೀಲ, ಸಂತೋಷ ಹಚ್ಯಾಳ ಶಿವಪುತ್ರ ಬುದಿಹಾಳ ಬಾಬು ಕ್ಯಾತನಾಳ ಮಲ್ಲಪ್ಪ ಹಿರೇಕುರಬರ ಶಿವಶಂಕರ ಬುದಿಹಾಳ, ರಾಜು ಮುಚಖೇಡ, ಹಾಗೂ ಸೊಸೈಟಿ ಮಾಜಿ ಸಿ.ಇ.ಓ ಯಾದ ಜಗನಾಥ ಕುಲಕರ್ಣಿ, ಸೊಸೈಟಿ ಸಿ.ಇ.ಓ ಅದ ಮಾಡಿವಾಳಪ್ಪ ಹಿಕ್ಕನಗುತ್ತಿ, ಉಮೇಶ್ ಇಂಗಳಗಿ, ಲಚಪ್ಪ.ಬಸರಿ, ಗುರುನಾಥ ಬಸರಿ, ಶೇಖಪ್ಪ ಪೂಜಾರಿ ಮಲ್ಲಪ್ಪ ಬಿರಾದಾರ ಮಾಶ್ಯಾಖಸಾಬ ಬಾಗವಾನ, ಶ್ರೀಧರ ಪತ್ತಾರ ಮುತ್ತು ಹಡಪದ ಮಾಂತೇಶ ಕೂಟನೂರ ಮಾಂತೇಶ ತಳ್ಳೋಳ್ಳಿ, ಸುನಿಲ್ ನಾಟಿಕಾರ ಮಾರುತಿ ದೊಡ್ಡಮನಿ, ಹಾಗೂ ರೈತರು ಸಾರ್ವಜನಿಕರು ಈ ತೊಗರಿ ಕೇಂದ್ರ ಉದ್ಘಾಟನೆ ಸಂಭ್ರಮ ಹಂಚಿ ಕೊಂಡರು ಹಾಗೂ ಸೊಸೈಟಿ ಸಿಬ್ಬಂದಿಗಳಾದ ಮುರಳಿಧರ ಕುಲಕರ್ಣಿ ಸಂತೋಷ ನಾಟಿಕಾರ, ಬಾಲು ಮೋಪಗಾರ, ಇವರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button