ಹೊಸಳ್ಳಿ ಗ್ರಾಮ ಪಂಚಾಯತಿಯಲ್ಲಿ ಎನ್.ಎಸ್.ಎಸ್ ವಾರ್ಷಿಕ ವಿಶೇಷ – ಶಿಬಿರದ ಪೂರ್ವಭಾವಿ ಸಭೆ.
ರೋಣ ಏ.01

ತಾಲೂಕಿನ ಕೆ.ಎಸ್.ಎಸ್ ಪದವಿ ಮಹಾ ವಿದ್ಯಾಲಯದ ರಾಷ್ಟ್ರಿಯ ಸೇವಾ ಯೋಜನಾ ಘಟಕದ ಅಡಿಯಲ್ಲಿ ವಾರ್ಷಿಕ ವಿಶೇಷ ಶಿಬಿರವನ್ನು ದತ್ತು ಗ್ರಾಮವಾದ ಹೊಸಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದೆ. ಆ ವಿಷಯವಾಗಿ ಹೊಸಳ್ಳಿ ಗ್ರಾಮಪಂಚಾಯತಿಯ ಸಭಾಂಗಣದಲ್ಲಿ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಪ್ರಾರಂಭದಲ್ಲಿ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಪಿ.ಆರ್ ಹಿರೆಮಠ ರವರು ಸಭೆಯಲ್ಲಿರುವ ಎಲ್ಲಾ ಪ್ರಮುಖರನ್ನು ಸ್ವಾಗತಿಸಿದರು. ನಂತರ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಕೆ.ಎಸ್.ಎಸ್ ಮಹಾವಿದ್ಯಾಲಯದ ಎನ್.ಎಸ್.ಎಸ್ ಕಾರ್ಯಕ್ರಮದ ಅಧಿಕಾರಿಗಳಾದ ಡಾಕ್ಟರ್, ಎಸ್.ಆರ್ ನದಾಫ್ ರವರು ರಾಷ್ಟ್ರಿಯ ಸೇವಾ ಯೋಜನೆಯ ರೂಪುರೇಷೆಗಳ ಬಗ್ಗೆ ಹಾಗೂ ಅದರ ಮಹತ್ವದ ಬಗ್ಗೆ ಮಾತನಾಡಿದರು ಅದೇ ರೀತಿಯಾಗಿ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಸಿ.ಬಿ ಪೊಲೀಸ್ ಪಾಟೀಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಮಯದಲ್ಲಿ ಸಭೆಯಲ್ಲಿ ಯುವ ರಾಜಕೀಯ ನೇತಾರ ಬಿ.ಎಸ್ ರಡ್ಡೆರ್, ಶರಣಪ್ಪ ಕುರಿ, ಶಿವಲಿಂಗಯ್ಯ ಸ್ಥಾವರಮಠ, ಶಿವನಗೌಡ ಜುಮ್ಮನಗೌಡ್ರ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಶಿವಪ್ಪ ತಳವಾರ ಪಿ.ಡಿ.ಓ ಅಧಿಕಾರಿಗಳು ಅದೇ ರೀತಿಯಾಗಿ ಕೆ.ಎಸ್.ಎಸ್ ಮಹಾವಿದ್ಯಾಲಯದ ಸ್ಥಾನಿಕ ಮುಖ್ಯಸ್ಥ ರಾದ ಐ ಬಿ ದಂಡಿನ ಸರ್, ಮಹಾವಿದ್ಯಾಲಯ ಉಪನ್ಯಾಸಕಾರದ ಎಂ.ಎಚ್ ನಾಯ್ಕರ್, ಎಸ್.ವಿ ಸಂಕನಗೌಡ್ರ, ಯು.ಬಿ ಬಸನಗೌಡ್ರ, ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ.ಗದಗ