ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ ನೀರು ಮಿತವಾಗಿ ಬಳಸಿ ಹಾಗೂ ಪಕ್ಷಿ ಸಂಕುಲಕ್ಕೆ – ನೀರು ಮತ್ತು ಆಹಾರಕ್ಕಾಗಿ ಕಾಳು ಹಾಕುವ ಅಭಿಯಾನ.
ಕೂಡ್ಲಿಗಿ ಏ.10

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಾರ್ಚ್ 22 ರಂದು ವಿಶ್ವ ಜಲ ದಿನಾಚರಣೆ ಪ್ರಯುಕ್ತವಾಗಿ ಹಮ್ಮಿಕೊಳ್ಳಲಾಗಿದ್ದ ನೀರು ಮಿತವಾಗಿ ಬಳಿಸುವ ಹಾಗೂ ಪಕ್ಷಿ ಸಂಕುಲಕ್ಕೆ ಕೂಡ್ಲಿಗಿ ತಾಲೂಕಿನಾದ್ಯಂತ ಅನೇಕ ಗ್ರಾಮಗಳಲ್ಲಿ ಗ್ರಾಮೀಣ ಭಾಗದ ಜನರಿಗೆ ತಮ್ಮ ತಮ್ಮ ಮನೆಗಳ ಹತ್ತಿರವಿರುವ ಮರ ಗಿಡಗಳ ಕೆಳಗೆ ಹಾಗೂ ಮನೆಗಳ ಮೇಲ್ಚಾವಣಿಯ ಮೇಲೆ ನೀರಿಗೆ ನೆರಳು ಮಾಡಿ ಬಾಟಲ್ ಗಳ ಮೂಲಕ ಬಟ್ಟಲುಗಳ ಮೂಲಕ ವಿವಿಧ ಕಪ್ಪುಗಳ ಮೂಲಕ ನೀರಿಡುವಂತೆ ಹಾಗೂ ಸ್ವಲ್ಪ ಸ್ವಲ್ಪ ಕಾಳು ಹಾಕುವುದರಿಂದ ಪಕ್ಷಿ ಸಂಕುಲ ಪ್ರತಿ ದಿನದ ಆಹಾರ ಮತ್ತು ನೀರನ್ನು ಹುಡುಕಿ ಕೊಂಡು ತಮ್ಮ ಜೀವನವನ್ನು ಸಾಗಿಸುವಂತಹ ಪಕ್ಷಿ ಸಂಕುಲಕ್ಕೆ ಮಾನವನು ಪ್ರೀತಿಯಿಂದ ನೀರು ಮತ್ತು ಆಹಾರ ಹಾಕುವುದರಿಂದ ಒಂದು ದಿನ ಆಹಾರ ಮತ್ತು ನೀರು ಉಪಯೋಗಿಸಿದಂತಹ ಪಕ್ಷಿಗಳು ಪ್ರತಿ ದಿನಾಲು ಆ ಸ್ಥಳಕ್ಕೆ ಬರುತ್ತದೆ ಆದ್ದರಿಂದ ಮಾನವನು ಪಕ್ಷಿ ಸಂಕುಲಗಳ ಸಾಮಾಜಿಕ ಕಾಳಜಿಯನ್ನು ಮಾಡುವುದರಿಂದ ಸಾಕಷ್ಟು ರೀತಿಯ ಪಕ್ಷಿಗಳು ಜೀವಿಸಲು ಹಾಗೂ ಬದುಕಲು ಸಾಧ್ಯವಾಗುತ್ತದೆ ಆದ್ದರಿಂದ ಆ ಪಕ್ಷಿಗಳ ಜಾಗೃತಿ ಮೂಡಿಸುವ ಕಾರ್ಯಕ್ರಮನ್ನು ಮಾಡಲಾಯಿತು. ಈ ಕಾರ್ಯಕ್ರಮದ ಉದ್ದೇಶವು ಪಕ್ಷಿ ಸಂಕುಲಕ್ಕೆ ಸಮಯಕ್ಕೆ ಸರಿಯಾಗಿ ಆಹಾರ ನೀರು ಸಿಗಲಿ ಎಂಬ ಉದ್ದೇಶದಿಂದ ಬಿರು ಬಿಸಿಲಿನ ತಾಪಮಾನಕ್ಕೆ ನಲುಗುತ್ತಿರುವ ಪಕ್ಷಿಗಳ ಸಂಕುಲಕ್ಕೆ ನೀರು ಉಣಿಸುವ ಅಭಿಯಾನ ಕಾರ್ಯಕ್ರಮ ಮುಂದುವರಿಸಿದ್ದುಈ ಕಾರ್ಯಕ್ರಮಕ್ಕೆ ಅನೇಕ ಗ್ರಾಮಸ್ಥರು ಮಹಿಳೆಯರು ಯುವಕರುಗಳು ಅಧಿಕಾರಿಗಳು ಮುಖಂಡರುಗಳು ಭಾಗವಹಿಸಿ ಸಹಕರಿಸಿದರು.

ಹಾಗೆ ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ರೀತಿಯಲ್ಲಿ ನೀರು ಪೋಲಾಗುವ ಕಾರಣದಿಂದ ಗ್ರಾಮೀಣದ ಭಾಗದ ಜನರಿಗೆ ಬದುಕಿನ ಭಾಗವಾಗಿರುವ ನೀರನ್ನು ಮಿತವಾಗಿ ಬಳಸಬೇಕು ನೀರು ಜೀವ ವೈವಿಧ್ಯ ದಿಂದ ಉಳಿವಿಗೆ ನೈಸರ್ಗಿಕ ಸಂಪನ್ಮೂಲಗಳಾದ ಗಾಳಿ ನೀರು ಮತ್ತು ಆಹಾರ ಅತ್ಯವಶ್ಯಕ ಭೂಮಿಯ ಮೇಲಿನ ಅತ್ಯಮೂಲ್ಯವಾದ ನೈಸರ್ಗಿಕ ಸಂಪನ್ಮೂಲಗಳಾದ ನೀರು ಸರ್ವ ಜೀವಿಗಳ ಉಳಿವಿಗೆ ಅತಿ ಅಮೂಲ್ಯ ಕ್ರಿಮಿ ಕೀಟಗಳಿಂದ ಕಾಡು ಮೃಗಗಳವರಿಗೆ ನೀರು ಅವಶ್ಯಕತೆ ನೀರಿಲ್ಲದೆ ಬದುಕಿನಲ್ಲಿ ಶುದ್ದವಾದ ಗಾಳಿಯು ನಂತರ ಯಾವುದೇ ಜೀವಿಗಳ ಹುಳಿವಿಗೆ ನೀರು ಎರಡನೆಯ ಪ್ರಮುಖ ನೈಸರ್ಗಿಕ ಸಂಪನ್ಮೂಲವಾಗಿದೆ ಹಾಗೆ ಸರ್ವ ಜೀವ ಸಂಕುಲಕ್ಕೆ ಈ ಭೂಮಿಯ ಮೇಲೆ ಸುಮಾರು 71% ನೀರಿನಿಂದ ಆವೃತವಾಗಿದೆ ಇದರಲ್ಲಿ ಕೇವಲ ಮೂರು ಪ್ರತಿ ಶತ ಮಾತ್ರ ಸಿಹಿ ನೀರಿನ ಪ್ರಮಾಣವಾಗಿ ಸಿಗುತ್ತದೆ ಆದ್ದರಿಂದ ಪ್ರತಿ ಗ್ರಾಮೀಣದ ಜನರು ನೀರನ್ನು ವೇಸ್ಟ್ ಮಾಡದಂತೆ ಮಿತವಾಗಿ ಬಳಸಿ ಸಂರಕ್ಷಣೆ ಮಾಡಬೇಕು ಎಂದು ಜಾಗೃತಿ ಕಾರ್ಯಕ್ರಮವನ್ನು ಮಾರ್ಚ್ 22 ರಿಂದ ಏಪ್ರಿಲ್ ಹತ್ತರವರೆಗೆ ಹಮ್ಮಿಕೊಳ್ಳಲಾಗಿತ್ತು. ಹಾಗೆ ಈ ಅಭಿಯಾನ ಕಾರ್ಯಕ್ರಮಗಳಲ್ಲಿ ಯೋಜನಾ ಅಧಿಕಾರಿಗಳಾದ ಸಂತೋಷ್, ಮತ್ತು ಕೃಷಿ ಮೇಲ್ವಿಚಾರಕರಾದ ಮಹಾಲಿಂಗಯ್ಯ ಸವಣೂರು, ವಲಯ ಮೇಲ್ವಿಚಾರಕರಾದ ರುದ್ರೇಶ್, ಜ್ಯೋತಿ, ಕರಿಯಪ್ಪ, ಪ್ರಕಾಶ್, ಅಭಿಷೇಕ್, ಉಮೇಶ್, ರೇಣುಕಾ, ಕಾಜಾಬನ್ನಿ, ರೇಖಾ, ಅಶ್ವಿನಿ ಇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ