ವಿದ್ಯಾಭ್ಯಾಸಕ್ಕೆ ಆಸರೆಯಾದ ಸರ್ಕಾರಿ ಹಾಸ್ಟೆಲ್, ವಾಣಿಜ್ಯ ವಿಭಾಗದಲ್ಲಿ ಶೇ 95 ಅಂಕ ಪಡೆದ – ಬಡ ಕೂಲಿ ಕಾರ್ಮಿಕರ ಮಕ್ಕಳು.

ಕೂಡ್ಲಿಗಿ ಏ.11

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಎ.ಕೆ ಲೋಕೇಶ್ ಎಂಬ ವಿದ್ಯಾರ್ಥಿಯು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳು ಪಡೆದು (571) ಕನ್ನಡ (98)ಇಂಗ್ಲಿಷ್ (91)ಇತಿಹಾಸ(99) ಅರ್ಥಶಾಸ್ತ್ರ(96) ವ್ಯವಹಾರ ಅಧ್ಯಯನ(95) ವಾಣಿಜ್ಯ ಶಾಸ್ತ್ರ(92) ಕಾಲೇಜಿಗೆ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ರಮೇಶ್ ಡಿ ಎಂಬ ವಿದ್ಯಾರ್ಥಿಯು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 600 ಕ್ಕೆ (530) ಅಂಕಗಳು ಪಡೆದು ಕನ್ನಡ (96) ಇಂಗ್ಲಿಷ್ (76) ಇತಿಹಾಸ (98) ಅರ್ಥಶಾಸ್ತ್ರ (81) ವ್ಯವಹಾರ ಅಧ್ಯಯನ (98) ವಾಣಿಜ್ಯ ಶಾಸ್ತ್ರ (81) ಕಾಲೇಜಿಗೆ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಡಿ ಮಧು ಕುಮಾರ್ ಎಂಬ ವಿದ್ಯಾರ್ಥಿಯು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 600 ಕೆ (524) ಅಂಕಗಳು ಪಡೆದು ಕನ್ನಡ (98) ಇಂಗ್ಲಿಷ್ (68) ಇತಿಹಾಸ (96) ಅರ್ಥಶಾಸ್ತ್ರ (78) ವ್ಯವಹಾರ ಅಧ್ಯಯನ (96) ವಾಣಿಜ್ಯ ಶಾಸ್ತ್ರ (88) ಕಾಲೇಜಿಗೆ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ. ಆಸರೆಯಾದ ಸರ್ಕಾರಿ ವಿದ್ಯಾರ್ಥಿ ನಿಲಯ. ಊರಿಂದ ಪ್ರಯಾಣ ಮಾಡಿ ಕಾಲೇಜಿಗೆ ಬರಲು ವಿಳಂಬವಾದ ಕಾರಣ ಪಟ್ಟಣದ ಡಾ, ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಪ್ರವೇಶ ಪಡೆದು ವಿದ್ಯಾಭ್ಯಾಸಕ್ಕೆ ಸರ್ಕಾರಿ ವಿದ್ಯಾರ್ಥಿ ನಿಲಯ ಆಸರೆಯಾಗಿದೆ ಹಾಗೂ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕೂಡ್ಲಿಗಿ ತಾಲೂಕಿನ ಅರ್ಜುನ ಚಿನನ್ನಹಳ್ಳಿಯ ಎ.ಕೆ ಲೋಕೇಶ್ ತಂದೆ ನಾಗರಾಜ ಎ.ಕೆ ರಮೇಶ.ಡಿ ತಂದೆ ದುರುಗೇಶ, ಡಿ ಮಧು ಕುಮಾರ್ ತಂದೆ ದುರುಗಪ್ಪ ಇವರ ತಂದೆ ಬಡಕೂಲಿ ಕಾರ್ಮಿಕ ಮನೆಯಲ್ಲಿ ತುಂಬಾ ಕಡು ಬಡತನ ನಡುವೆ ಅದನ್ನ ಮೆಟ್ಟಿನಿಂತು ಯಾವುದೇ ಲೆಕ್ಕಿಸದೆ ಓದುವ ಛಲವನ್ನು ಬೆಳೆಸಿ ಕೊಂಡು ವಿದ್ಯಾರ್ಥಿ ಪ್ರವೇಶ ಪಡೆದು ತನ್ನ ಓದಿನ ಕಡೆ ಗಮನ ವಹಿಸಿ ಉತ್ತಮ ಅಂಕ ಗಳಿಸಿದ್ದಾರೆ.” ವಿದ್ಯಾಭ್ಯಾಸಕ್ಕೆ ಶ್ರಮಿಸಿದ ನನ್ನ ತಂದೆ ಹಾಗೂ ನಿಲಯ ಪಾಲಕರಿಗೂ ಕಾಲೇಜಿನ ಎಲ್ಲಾ ಶಿಕ್ಷಕರಿಗೂ ಕೊಟ್ರೇಶ್ ಗುರುಗಳಿಗೂ ತುಂಬಾ ಧನ್ಯವಾದಗಳು ಇವರ ಸಹಾಯ ದಿಂದ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು”ಎ.ಕೆ ಲೋಕೇಶ್, ರಮೇಶ ಡಿ, ಡಿ ಮಧು ಕುಮಾರ್ ವಾಣಿಜ್ಯ ವಿಭಾಗ ವಿಧ್ಯಾರ್ಥಿಗಳು. ಪಟ್ಟಣದ ಸರ್ಕಾರಿ ಕಾಲೇಜಿನ ಫಲಿತಾಂಶ ಕಾಲೇಜಿಗೆ ಅತಿ ಹೆಚ್ಚು ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ವಿಶಾಲಕ್ಷಿ ಟಿ (575/600) ಶೇ 96 ವಾಣಿಜ್ಯ ವಿಭಾಗದಲ್ಲಿ (571/600) ಶೇ 95.16 ವಿಜ್ಞಾನ ವಿಭಾಗದಲ್ಲಿಬಿ ಎನ್ ಸಿದ್ದೇಶ್(500/600) ಶೇ 83.33% ಕಲಾ ವಿಭಾಗದಲ್ಲಿ 330 ವಿದ್ಯಾರ್ಥಿಗಳ ಪೈಕಿ 145 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 87 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಒಟ್ಟು 59 ವಿದ್ಯಾರ್ಥಿಗಳು ಉತ್ತೀರ್ಣ ಹೊಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 90 ವಿದ್ಯಾರ್ಥಿಗಳು ಪರೀಕ್ಷೆ ಪೈಕಿ 48 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದೆ ಒಟ್ಟು ಕಾಲೇಜಿನಲ್ಲಿ 507 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ 252 ಎಲ್ಲಾ ವಿಭಾಗದಲ್ಲಿ 50% ತೇರ್ಗಡೆ ಹೊಂದಿದ್ದಾರೆ ಎಂದು ಪ್ರಾಂಶುಪಾಲರಾದ ಕೊತ್ತಮ್ಮ ಟಿ ರವರು ಪತ್ರಿಕಾ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದ್ದಾರೆ.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button