ಏಳಿ ! ಎದ್ದೇಳಿ !! ಎಚ್ಚರಗೊಳ್ಳಿ ಸಂವಿಧಾನ ಕಾಪಾಡಿ…..

ಪಾಪ ದೌಜ೯ನ್ಯಗಳು ನುಂಗಿನಾ ಬರೆದ ಸಂವಿಧಾನವೆಂಬ ಓಲೆನೀವು ಓದಲಾಗದೇ ಆಳುವ ದೊರೆಗಳಾಗದೇ ಮತ್ತೆ ಸೇರುತ್ತಿದೆ ಮನುವಾದಿಗಳ ಮನೆ ಮೂಲೆ ..

ಏಳಿ ಎದ್ದೇಳಿ ಎಚ್ಚರಗೊಳ್ಳಿ ರಾಮ ಮಂದಿರ ಕಟ್ಟಾಯಿತ್ತು .ರಾಮನ ಜಪ ತಪ ಸ್ಮರಣೆಯೆಂಬ ಅಗ್ನಿ ಕುಂಡದಲ್ಲಿ ಸುಡಲಿವೆ ನನ್ನ ಸಂವಿಧಾನ ಪುಟಗಳು

ಅರಿವಿಲ್ಲವೆ ನಿಮ್ಮಗೆ ?ಸನಾತನ ಧರ್ಮ ನಡೆಸಿಕೊಂಡ ಬಗೆ.ಕೊರಳಿಗೆ ಬಾರಿಗೆ ಕಟ್ಟಿದು? ಕಿವಿ ಸಿಳಿದ್ದು ? ನಾಲಿಗೆ ಕತ್ತರಿಸಿದ್ದು ? ನಿಮ್ಮ ಅಕ್ಕ ತಂಗಿಯರ ಸೊಂಟಕ್ಕೆ ಕೈ ಹಾಕಿ ಶೀಲ ಹರಣ ಮಾಡಿದು ? ನನ್ನ ಕೊರಳಿಗೆ ಚಪ್ಪಲಿ ಹಾರ ಹಾಕಿ ಅವಮಾನಿಸಿದ್ದು.

ಏಳಿ ಎದ್ದೇಳಿ ಎಚ್ಚರಗೊಳ್ಳಿನಿಮಗೆ ಕವಿದ ಕರಿ ಮೂಸಕು ಮರೆ ಮಾಡಿ .ದ್ವೇಷ ಅಸೂಯೆ ಎಡ ಬಲವೆಂಬ ಭಾವನೆ ದೂರ ಮಾಡಿ. ಮೂಲಭೂತ ಹಕ್ಕುಗಳು ಸ್ವಾತಂತ್ರ್ಯ ಸಮಾನತೆ ಸಹೋದರತ್ವ ಉಳಿಸಲು ನಾ ಬರೆದ ಸಂವಿಧಾನ ರಕ್ಷಣೆ ಮಾಡಿ.

ಏಳಿ ಎದ್ದೇಳಿ ಶಿಕ್ಷಿತರಾಗಿ ಸಂಘಟಿತರಾಗಿ .ಹೋರಾಡಿಮನುವಾದಿಗಳು ಕುತಂತ್ರ ಅಡಗಿಸಿ. ನನ್ನ ಸಂವಿಧಾನ ರಕ್ಷಣೆ ಹೊಣೆ ನಿಮ್ಮೆಲ್ಲರ ಹೊಣೆ.ಚುನಾವಣೆಯಲ್ಲಿ ಹಾಕದಿರಿ ಮನುವಾದಿಗಳಿಗೆ ಮಣೆ.ಏಳಿ ಎಚ್ಚರಗೊಳ್ಳಿ ಸಂವಿಧಾನ ಕಾಪಾಡಿ ಕಾಪಾಡಿ ಕಾಪಾಡಿ ಕಾಪಾಡಿ

ಭೀಮಾಶಂಕರ ಕದಂ ಇಕ್ಕಳಕಿ ಕನಾ೯ಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರು ಕಲಬುರ್ಗಿ( ಫ್ರೋ.ಬಿ ಕ್ರಷ್ಣಪ್ಪ ಸ್ಥಾಪಿತ )

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button