ಅಕ್ರಮ ಅಕ್ಕಿ ಸಾಗಿಸುತ್ತಿರುವಾಗ ಪಿಎಸ್ಐ ಗೀತಾಂಜಲಿ ಸಿಂಧೆ – ದಾಳಿ ನಡೆಸಿ ಕ್ರಮ ಜರುಗಿಸಿದರು.
ಕೊಟ್ಟೂರು ಏ .12

ಕೊಟ್ಟೂರು-ಹರಪನಹಳ್ಳಿ ರಸ್ತೆಯ ಕೆ.ಅಯ್ಯನಹಳ್ಳಿ ಗ್ರಾಮದ ಬ್ರಿಡ್ಜ್ ಹತ್ತಿರ ರಸ್ತೆಯಲ್ಲಿ ಒಂದು ಬೊಲೆರೋ ಗೂಡ್ಸ್ ವಾಹನದಲ್ಲಿ ಸಾರ್ವಜನಿಕರ ವಿತರಣ ವ್ಯವಸ್ಥೆಗೆ ಮತ್ತು ಸರ್ಕಾರದ ಇತರ ಯೋಜನೆಗಳಿಗೆ ಬಿಡುಗಡೆ ಮಾಡಿರುವ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ ಮೋಸದಿಂದ ಹೆಚ್ಚಿನ ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಶಬ್ಬೀರ್ ತಂದೆ ಟಿಪ್ಪುಸಾಬ್ ಮತ್ತು ಜಂದುಸಾಬ್ ತಂದೆ ಬಾಬುಸಾಬ್ ಮತ್ತು ಮಂಜುನಾಥ್ ಸೇರಿಕೊಂಡು ರಿಬ್ಯಾಗ್ ಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ವಾಹನದ ಮೇಲೆ ಗೀತಾಂಜಲಿ ಶಿಂದೆ ಪಿಎಸ್ಐ ಕೊಟ್ಟೂರು ಮಂಜುನಾಥ್ ಆಹಾರ ನಿರೀಕ್ಷಕರು ಕೊಟ್ಟೂರು ದಾಳಿ ಮಾಡಿ ಕ್ರಮ ಜರುಗಿಸಿ ಕೆ.ಎ 35 ಡಿ.2105 ಗಾಡಿಯಲ್ಲಿರುವ 25604 ರೂಪಾಯಿಗೆ ಬೆಲೆ ಬಾಳುವ 740 ಕೆಜಿ ಅಕ್ಕಿ 20 ಚೀಲ ಚೀಲಗಳನ್ನು ಮತ್ತು 70,000 ರೂಪಾಯಿಗಳನ್ನು ವಶ ಪಡಿಸಿಕೊಂಡರು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ. ಕೊಟ್ಟೂರು