“ಎಲ್ಲಾರೂ ಸೇರಿ ಡೆಂಗ್ಯೂ ಸೋಲಿಸೋಣ”.

ಶಿರೂರು ಜು.20

ಮನ್ನಿಕಟ್ಟಿ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟೆ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹ ಯೋಗದಲ್ಲಿ ಮನ್ನಿಕಟ್ಟಿ ಗ್ರಾಮದಲ್ಲಿ ಮಳೆಗಾಲದಲ್ಲಿ ಸಾಂಕ್ರಾಮಿಕವಾಗಿ ಹರಡುವ ರೋಗಗಳ ತಡೆಗೆ, ಮುಂಜಾಗ್ರತೆಯ “ಆರೋಗ್ಯ ಅರಿವು ಜಾಗೃತಿ” ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ, ಎಸ್ ಎಸ್ ಅಂಗಡಿಯವರು, ಆರೋಗ್ಯವಂತ ಸಮಾಜಕ್ಕಾಗಿ ವೈಯಕ್ತಿಕ ಸ್ವಚ್ಛತೆ ಪರಿಸರ ಸ್ವಚ್ಛತೆ, ಮುಂಜಾಗ್ರತೆ ಕ್ರಮಗಳ ಪಾಲನೆ ಮಾಡಬೇಕು. ಡೆಂಗ್ಯೂ, ಚಿಕೂನ್ ಗುನ್ಯಾ, ಮಲೇರಿಯಾ, ಆನೆಕಾಲು ರೋಗ ಮೆದುಳು ಜ್ವರ ರೋಗಗಳು ಸೊಳ್ಳೆಗಳ ಕಡಿತ ದಿಂದ ಸಾಂಕ್ರಾಮಿಕವಾಗಿ ಒಬ್ಬರಿಂದ ಒಬ್ಬರಿಗೆ ಸಾಂಕ್ರಾಮಿಕವಾಗಿ ಹರಡುವುವು ಡೆಂಗ್ಯೂ ಚಿಕೂನ್ ಗುನ್ಯಾ ವೈರಾಣು ರೋಗಕ್ಕೆ ಕಾರಣವಾದ “ಈಡೀಜ್ ಇಜಿಪ್ತೆ” ಸೊಳ್ಳೆಯು ಸಂತಾನೋತ್ಪತ್ತಿಗೆ ಸ್ವಚ್ಛ ನೀರಿನಲ್ಲಿ ತತ್ತಿ ಇಟ್ಟು ಲಾರ್ವಾ ಉತ್ಪತ್ತಿ ಮಾಡುವದು. ಮುಂಜಾಗ್ರತೆ ಕ್ರಮವಾಗಿ ನೀರಿನ ಸಂಗ್ರಹಗಳ ಮೇಲೆ ತಪ್ಪದೇ ಮುಚ್ಚಳಿಕೆ ಹಾಕಬೇಕು.

ಟೆಂಗಿನ ಚಿಪ್ಪು, ಒಡೆದ ಬಾಟಲ್, ಟೈರ್ ಟ್ಯೂಬ್, ಅನುಪಯುಕ್ತ ವಸ್ತು ಕಸ ವಿಲೇವಾರಿ ಮಾಡಬೇಕು. ಮನೆ ಸುತ್ತ ಮುತ್ತ ಪರಿಸರ ಸ್ವಚ್ಛತೆ ಕಾಪಾಡಿ ಕೊಳ್ಳಬೇಕು ಸೊಳ್ಳೆ ಪರದೆ ನಿರೋಧಕ ಬಳಸಬೇಕು ಯಾವುದೇ ತರಹ ಜ್ವರ ಕಾಣಿಸಿದರೆ ಹತ್ತಿರದ ಸರಕಾರಿ ಆಸ್ಪತ್ರೆಗೆ ಭೇಟಿ. ಡೆಂಗ್ಯೂ ರೋಗದ ಭಯ ಬೇಡ ಮುನ್ನೆಚ್ಚರಿಕೆ ಕ್ರಮಗಳ ಪಾಲನೆಯೇ ಮುದ್ದು. “ಆರೋಗ್ಯವಂತ ಕುಟುಂಬ ಆರೋಗ್ಯವಂತ ಸಮಾಜ” ನಿರ್ಮಾಣಕ್ಕೆ ಡೆಂಗ್ಯೂ ಮಹಾಮಾರಿ ತಡೆಗೆ, ಈಡೀಜ್ ಇಜಿಪ್ತೆ ಲಾರ್ವಾ ನಿರ್ಮೂಲನೆಗೆ ಕೈಜೋಡಿಸಿರಿ. “ಎಲ್ಲರೂ ಸೇರಿ ಡೆಂಗ್ಯೂ ಸೋಲಿಸೋಣ” ಎಂದು ಸಾರ್ವಜನಿಕರಿಗೆ ಕರೆ ನೀಡಿದರು. ಶುದ್ಧ ನೀರು ಸೇವನೆ ಮಾಡಬೇಕು ಬಿಸಿ ಊಟ ಸೇವನೆ ವೈಯಕ್ತಿಕ ಸ್ವಚ್ಛತೆ ಆದ್ಯತೆ ನೀಡಬೇಕು ಎಂದರು. ಆರೋಗ್ಯ ಇಲಾಖೆಯ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ ಸೊಳ್ಳೆ ಉತ್ಪತ್ತಿ ತಾಣಗಳ ಸಮೀಕ್ಷೆ ಪರೀಕ್ಷೆ ಮಾಡಿ ಜಾಗೃತಿ ಮೂಡಿಸಿದರು. “ಆರೋಗ್ಯ ಅರಿವು ಜಾಗೃತಿ” ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮದ ಮುಖಂಡರು, ಯುವಕರು ಭಾಗವಹಿಸಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button