“ಬದುಕುವ ಕಲೆ ನೀ ಅರಿತುಕೊಂಡರೆ ನಿಜ ಮಾನವನಾಗುವೆ”…..

ಕೆಟ್ಟತನದ ವೈರಿಯ ದೂರ ಸರಿಸಿ

ನಂಬಿಕೆ ವಿಶ್ವಾಸರ್ಹ ಸ್ನೇಹತನ ಬೆಳಸಿ

ಜ್ಞಾನ ವಿನಯ ಅಸ್ತ್ರಗಳ ಬಳಸಿ

ಸುಖಮಯ ಜೀವನ ಸಾಗಿಸಿ

ನಿತ್ಯ ಸತ್ಯ ನೆರ ನಡೆ ನುಡಿಯಿರಲಿ

ಕೋಪ ತಾಪ ಅಸೂಯೆ ಅಹಂ ಅಳಸಿ

ಜಗದದ ನಿಜ ಪಾಪಿಯ ಗುಣ ಸ್ವಭಾವ ಬೇಡ

ಮೋಸದ ಮಾತು ನಯವಂಚಕತನ ಬೇಡ

ತಂದೆ ತಾಯಿ ಹಿರಿಯರ ಪುಣ್ಯದ ಫಲ ನೀ

ಜವಾಬ್ದಾರಿ ನಿಭಾಯಿಸಿ

ಅವಶ್ಯಕತೆ ಇರುವಂಗೆ ನೊಂದವರ ಸೇವೆ

ಮರೆಯದೇ ಮಾಡಿ

ತನು ಮನದ ಆರೋಗ್ಯ ಸ್ನೇಹಿಯಾಗಿ ನಿಜ

ಕಾಯಕ ಯೋಗಿಯಾಗಿ

ಅನುಭವದ ಅಮೃತ ಸವಿ ಸುಕೃತಫಲದ

ಸುಖತನದ ಒಡೆಯರಾಗಿ

ಯುಗ ಪುರುಷರ ಆದರ್ಶತನದ ಜೀವನ ಗಾಥೆ

ಕೇಳಿ ಪಾಲಿಸಿ

ದೇಶದ ಜನರ ಸಂಸ್ಕಾರ ಸಂಸ್ಕೃತಿಯ ಸಿರಿ

ಉಳಸಿ ಬಳಸಿ

ಬದುಕಿನಲಿ ಸಮಾನತೆಯ ಸಾರವಿರಲಿ

ಸಕಲ ಜೀವಿಗಳ ಲೇಸ ಬಯಕೆ ಸಂತೃಪ್ತಿ ಸುಖ

ಜೀವನಕ್ಕೆ ನಾಂದಿ

ಮಾನವೀಯತೆಯ ಮಾನವನಾಗಿ ಗೌರವ

ಸರ್ವರಲಿರಲಿ

ದೇಶ ಸೇವೆಯೇ ಬಾಳಿನ ಗುರಿಯಾಗಿರಲಿ

ಬದುಕುವ ಕಲೆ ನೀ ಅರಿತುಕೊಂಡರೆ ನಿಜ

ಮಾನವನಾಗುವೆ.

ಶ್ರೀದೇಶಂಸು

ಶ್ರೀಸುರೇಶ ಶಂಕ್ರೆಪ್ಪ ಅಂಗಡಿ

ದೇವರ ಹಿಪ್ಪರಗಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button