ಕುರ್ತಕೋಟಿ ಗ್ರಾಮದಲ್ಲಿ 5 ನೇ. ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ – ಅದ್ದೂರಿ ಚಾಲನೆ.

ಕುರ್ತಕೋಟಿ ಏ.18

5 ನೇ. ಗದಗ ಜಿಲ್ಲೆಯ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ಇಂದು ಗದಗ ಜಿಲ್ಲೆಯ ಗದಗ ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಸರೋಜಾ ಬೂದಪ್ಪ ಅಂಗಡಿ ಅವರು ಚಾಲನೆ ನೀಡಿದರು.ಕುರ್ತಕೋಟಿ ಗ್ರಾಮದಲ್ಲಿ ಬೆಳಿಗ್ಗೆ 9 ಗಂಟೆಗೆ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷರು ಜೆ.ಕೆ ಜಮಾದಾರ ಅವರ ಮೆರವಣಿಗೆಯು ಗ್ರಾಮ ಪಂಚಾಯಿತಿ ಯಿಂದ ಆರಂಭ ಗೊಂಡು ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಲಕ್ಷ್ಮಿ ದೇವಸ್ಥಾನ, ಮಂಕಮ್ಮ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ ಶರಣಬಸವಶ್ವರ ದೇವಸ್ಥಾನ ಶ್ರೀ ಸಂಗೊಳ್ಳಿ ರಾಯಣ್ಣ ಮೂರ್ತಿ ಮಾರ್ಗದ ಮೂಲಕ ಸಮ್ಮೇಳನದ ಸಭಾ ಭವನದ ವರೆಗೂ ಮೆರವಣಿಗೆ ನಡೆಯಿತು.ಮೆರವಣಿಗೆ ಯೂದ್ದಕ್ಕೂ ಕುಂಭ ಹೊತ್ತ ಮಹಿಳೆಯರು, ಶೃಂಗಾರ ಗೊಂಡ ಎತ್ತಿನ ಬಂಡಿಗಳು, ಜಗ್ಗಲಗಿ, ಕರಡಿ ಮಜಲು ನಂದಿಕೋಲು ಮೇಳಗಳು ಇದ್ದವು ಎಂದು ವರದಿಯಾಗಿದೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button