ಸೂಲದಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ 2 ಗರ್ಭ ಧರಿಸಿದ – ಆಕಳುಗಳು ಸಾವು.

ಸೂಲದಹಳ್ಳಿ ಏ.19

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಸೂಲದಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಾಯಂಕಾಲ 6:30 ರ ಸಮಯದಲ್ಲಿ ಗುಡುಗು ಮಿಂಚು ಸಹಿತ ಮಳೆಯು ಬಂದಿದ್ದು, ಗರ್ಭ ಧರಿಸಿದ್ದ ಎರಡು ಆಕಳುಗಳು ಸಿಡಿಲಿಗೆ ಬಲಿಯಾಗಿರುವ ಘಟನೆ ನಡೆದಿದೆ.ಈ ಘಟನೆ ನಡೆದ ಸ್ಥಳದಲ್ಲಿ ಎರಡು ಆಕಳು ಸಿಡಿಲಿಗೆ ಬಲಿಯಾಗಿದ್ದು. ಈ ಆಕಳಿನ ಮಾಲೀಕರು ದಲಿತ ದೇವದಾಸಿ ಮಹಿಳೆಯಾದ ಹನುಮಕ್ಕ ಇವರಿಗೆ ಈ ಹಸುಗಳೇ ಜೀವನ ನಡೆಸಲು ಪ್ರತಿ ದಿನ ಹಾಲು ಕೊಡುವಂತಹ ಆಕಳುಗಳಾಗಿದ್ದು.

ಈ ಆಕಳುಗನ್ನೇ ನಂಬಿ ಹಾಲಿನ ಮಾರಾಟದಿಂದ ದಲಿತ ಕುಟುಂಬಸ್ಥರ ಜೀವನ ಸಾಗಿಸುತ್ತಿದ್ದು ಇವರಿಗೆ ದಿಕ್ಕೆ ತೋಚದೆ ಕಣ್ಣೀರಿಡುತ್ತಾ ಸಿಡಿಲಿಗೆ ಬಲಿಯಾದ ಆಕಳುಗಳನ್ನು ಕಂಡು ಆಕಳ ಮಾಲೀಕರು ಸಂಕಟದಿಂದ ತಮ್ಮ ಅಳಲನ್ನು ನಮ್ಮ ಸುದ್ದಿ ವಾಹಿನಿಗೆ ತಿಳಿಸಿರುತ್ತಾರೆ. ಸಂಬಂಧಪಟ್ಟಂತ ಇಲಾಖೆ ಅಧಿಕಾರಿಗಳು 2 ಆಕಳುಗಳ ಸಿಡಿಲಿಗೆ ಬಲಿ ಯಾಗಿರುವುದಕ್ಕೆ ಸರ್ಕಾರದ ವತಿಯಿಂದ ಪರಿಹಾರ ನೀಡಲಿ ಎಂದು ತಮ್ಮ ಅಳಲನ್ನು ಹೇಳಿ ಕೊಂಡಿರುತ್ತಾರೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button