ಸೂಲದಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ 2 ಗರ್ಭ ಧರಿಸಿದ – ಆಕಳುಗಳು ಸಾವು.
ಸೂಲದಹಳ್ಳಿ ಏ.19

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಸೂಲದಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಾಯಂಕಾಲ 6:30 ರ ಸಮಯದಲ್ಲಿ ಗುಡುಗು ಮಿಂಚು ಸಹಿತ ಮಳೆಯು ಬಂದಿದ್ದು, ಗರ್ಭ ಧರಿಸಿದ್ದ ಎರಡು ಆಕಳುಗಳು ಸಿಡಿಲಿಗೆ ಬಲಿಯಾಗಿರುವ ಘಟನೆ ನಡೆದಿದೆ.ಈ ಘಟನೆ ನಡೆದ ಸ್ಥಳದಲ್ಲಿ ಎರಡು ಆಕಳು ಸಿಡಿಲಿಗೆ ಬಲಿಯಾಗಿದ್ದು. ಈ ಆಕಳಿನ ಮಾಲೀಕರು ದಲಿತ ದೇವದಾಸಿ ಮಹಿಳೆಯಾದ ಹನುಮಕ್ಕ ಇವರಿಗೆ ಈ ಹಸುಗಳೇ ಜೀವನ ನಡೆಸಲು ಪ್ರತಿ ದಿನ ಹಾಲು ಕೊಡುವಂತಹ ಆಕಳುಗಳಾಗಿದ್ದು.

ಈ ಆಕಳುಗನ್ನೇ ನಂಬಿ ಹಾಲಿನ ಮಾರಾಟದಿಂದ ದಲಿತ ಕುಟುಂಬಸ್ಥರ ಜೀವನ ಸಾಗಿಸುತ್ತಿದ್ದು ಇವರಿಗೆ ದಿಕ್ಕೆ ತೋಚದೆ ಕಣ್ಣೀರಿಡುತ್ತಾ ಸಿಡಿಲಿಗೆ ಬಲಿಯಾದ ಆಕಳುಗಳನ್ನು ಕಂಡು ಆಕಳ ಮಾಲೀಕರು ಸಂಕಟದಿಂದ ತಮ್ಮ ಅಳಲನ್ನು ನಮ್ಮ ಸುದ್ದಿ ವಾಹಿನಿಗೆ ತಿಳಿಸಿರುತ್ತಾರೆ. ಸಂಬಂಧಪಟ್ಟಂತ ಇಲಾಖೆ ಅಧಿಕಾರಿಗಳು 2 ಆಕಳುಗಳ ಸಿಡಿಲಿಗೆ ಬಲಿ ಯಾಗಿರುವುದಕ್ಕೆ ಸರ್ಕಾರದ ವತಿಯಿಂದ ಪರಿಹಾರ ನೀಡಲಿ ಎಂದು ತಮ್ಮ ಅಳಲನ್ನು ಹೇಳಿ ಕೊಂಡಿರುತ್ತಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ