ಬಸರಕೋಡ ರಾಜ್ಯ ಮಟ್ಟದ ತರಬಂಡಿ ಸ್ಪರ್ಧೆಯಲ್ಲಿ – ಮಂಡಲ ಅಧ್ಯಕ್ಷನ ಎತ್ತುಗಳು ವಿಜಯ ಪತಾಕೆ.
ಬಸರಕೋಡ ಏ.19

ಗ್ರಾಮದ ಪವಾಡ ಬಸವೇಶ್ವರ ಜಾತ್ರೆಯ ಅಂಗವಾಗಿ ನಡೆದ ರಾಜ್ಯ ಮಟ್ಟದ ತರಬಂಡಿ ಸ್ಪರ್ಧೆ ಹಮ್ಮಿ ಕೊಳ್ಳುಲಾಗಿತ್ತು ಸ್ಪರ್ಧೆಯಲ್ಲಿ ರಾಜ್ಯದ ವಿಜಯಪುರ ರಾಯಚೂರು ಯದಗಿರಿ ಗುಲ್ಬರ್ಗಾ ಬಾಗಲಕೋಟೆ ಬೆಳಗಾವಿ ಜಿಲ್ಲೆಯ 52 ಜೊತೆ ಎತ್ತುಗಳು ಭಾಗವಹಿಸಿದ್ದವು. ಸ್ಪರ್ಧೆಯಲ್ಲಿ ತಾ ಮುಂದೆ ನಾ ಮುಂದೆ ಎಂದು ತಮ್ಮ ಎತ್ತುಗಳನ್ನು ಜಿಗ್ಗಿಸುತ್ತಿದ್ದ ಸ್ಪರ್ಧಾಳುಗಳು ಒಂದು ಹಂತದಲ್ಲಿ ಬಬಲಾದಿಯ ಸರ್ಜಾ ಎಂಬ ಎತ್ತುಗಳು 1340 ಅಡಿ ದೂರ ಕ್ರಮಿಸಿ ಜಿದ್ದಾ ಜಿದ್ದಿನ ಪೈಪೋಟಿಗೆ ತಂದು ನಿಲ್ಲಿಸಿದ್ದವು.
ತಕ್ಷಣವೆ ತನ್ನ ಸರದಿ ಆರಂಭಿಸಿದ ಬ್ಯಾಲ್ಯಾಳ ಗ್ರಾಮದ ಅವ್ವಣ್ಣಗೌಡ ಗ್ವಾತಗಿ ಅವರ 108 ಸೂರ್ಯ, ಬಸವ ನಾಡಿನ ಕೇಸರಿ ಎಂಬ ಹೆಸರಿನ ಎತ್ತುಗಳು ಅದೆ ನಿಗದಿತ ಸಮಯದಲ್ಲಿ 1428.6 ಅಡಿ ದೂರ ಕ್ರಮಿಸಿ ಕೊಲ್ಮಿಂಚಿನಂತೆ ಗುರಿ ತಲುಪಿದಾಗ ಸುಮಾರು 40 ಸಾವಿರಕ್ಕಿಂತ ಅಧಿಕ ಸಂಖ್ಯೆಯಲ್ಲಿ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು ಅವ್ವಣ್ಣಗೌಡರ ಅಭಿಮಾನಿಗಳು ಕೆಕೆ ಸಿಳ್ಳೆ ಹಾಕಿ ಸಂಭ್ರಮಿಸಿದರು.
ಇನ್ನೂ ಸ್ಪರ್ಧೆಯಲ್ಲಿ 25 ಎತ್ತುಗಳು ಬಾಕಿ ಇರುವಾಗಲೇ ಸಂಭ್ರಮಾಚರಣೆ ಮಾಡ ಲಾರಂಭಿಸಿದರು. ನೀರಿಕ್ಷೆಯಂತೆ ಉಳಿದ ಎತ್ತುಗಳು ಎಷ್ಟೇ ಪೈಪೋಟಿ ಮಾಡಿದರು ಗುರಿ ತಲುಪಲಿಲ್ಲ ಕೊನೆಗೆ ನಿರ್ಣಾಯಕರು ಬ್ಯಾಲ್ಯಾಳ ಎತ್ತುಗಳ ಫಲಿತಾಂಶ ಘೋಷಣೆ ಮಾಡುತ್ತಿದ್ದಂತೆ ಅವ್ವಣ್ಣಗೌಡನ್ನು ಮೈದಾನದಲ್ಲಿ ಅಭಿಮಾನಿಗಳು ಹೆಗಲ ಮೇಲೆ ಹೊತ್ತು ಹಲಗೆ ಹೊಡೆದು ಪಟಾಕಿ ಸಿಡಿಸಿ ಗುಲಾಲು ಎರಚಿ ಸಂಭ್ರಮಾಚರಣೆ ಮಾಡಿದರು.
ನಂತರ ಮೊದಲ ಬಹುಮಾನ ಸ್ಪ್ಲೆಂಡರ್ ಪ್ಲಸ್ ಬೈಕ್ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಜಾತ್ರೆಯ ಪ್ರಮುಖರಾದ ಶ್ರೀ ಅಪ್ಪು ದೇಸಾಯಿ, ಶ್ರೀಶೈಲ ಮೇಟಿ, ನಾಗರಾಜ್ ತಂಗಡಗಿ, ಸಿದ್ದು ಸಾಹುಕಾರ್ ಮೆಟಿ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ