ವಿದ್ಯುತ್ ಇಲ್ಲದ ಕಾರಣ ಪುಟ್ಟ ಕಂದಮ್ಮಗಳಿಗೆ – ಜೋಗುಳ ಆಸರೆ.
ಗೋರ್ಕಲ್ ಏ.19

ಭಾರತ ದೇಶ ಮುಂದುವರಿದ ರಾಷ್ಟ್ರ ಎಂದು ಸರಕಾರ ಗಂಟಾ ಘೋಷವಾಗಿ ಹೇಳುತ್ತೆ. ಆದರೆ ಮಾನ್ವಿ ತಾಲೂಕಿನ ಗೋರ್ಕಲ್ ಗ್ರಾಮ ಸ್ವಾತಂತ್ರ್ಯ ಲಭಿಸದ ಕಾರಣ ಇಲ್ಲಿನ ನಿವಾಸಿಗಳು ಒಂದು ವಾರದಿಂದ ವಿದ್ಯುತ್ ಸಂಪರ್ಕ ಇಲ್ಲದೆ ನರಳಾಡುತ್ತಿರುವ ದುಸ್ಥಿತಿ ಬಂದೊದಗಿದೆ.ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಗೋರ್ಕಲ್ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಬೇಸಿಗೆಯ ಏಟಿಗೆ ಪುಟಾಣಿ ಮಕ್ಕಳಿಗೆ ತೊಂದರೆಯಾಗಿದ್ದು. ಪುಟಾಣಿ ಮಕ್ಕಳನ್ನು ಮರಕ್ಕೆ ಜೋಕಾಲಿ ಹಾಕಿ ಜನರು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಕ್ತರ್ ಪಾಶಗೆ ಶಾಪ ಹಾಕುತ್ತಿದ್ದಾರೆ.ಮಾನ್ವಿ ತಾಲೂಕ ಪಂಚಾಯತಿ ಇ.ಓ ಖಾಲಿದ್ ಅಹ್ಮದ್ ಸಾಹೇಬ್ರೆ ನೀವು ಎ.ಸಿ ಕಚೇರಿಯಲ್ಲಿ ಸುಮ್ಮನೆ ಕೂರದೆ ಗೊರ್ಕಲ್ ಗ್ರಾಮಸ್ಥರ ಜನರ ಗೋಳಾಟ ಕಂಡು ವಿದ್ಯುತ್ ವ್ಯವಸ್ಥೆ ಮಾಡಿಸುವ ಕೆಲಸವಾದರು ಮಾಡಿ ಬಡವರ ಶಾಪ ನಿಮಗೂ ತಟ್ಟೋದು ಗ್ಯಾರಂಟಿ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ