ದಾಂಪತ್ಯ ಜೀವನಕ್ಕೆ ಕಾಲಿಟ್ಟ – 28. ನವ ಜೋಡಿ.

ಇಂಡಿ ಏ.19

ಬಂಗಾರ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆ, ಯುವಕ ಯುವತಿಯರು ಅತಿ ಕಡಿಮೆ ಸಂಬಳದಲ್ಲಿ ದುಡಿಯುತ್ತಿರುವದು. ಸೇರಿದಂತೆ ಹಲವಾರು ಸಮಸ್ಯೆಯಲ್ಲಿ ಯುವಕರು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡರೆ ಕುಟುಂಬದ ಅರ್ಥ ವ್ಯವಸ್ಥೆ ಸರಿದುಗಿಸುವಲ್ಲಿ ಮುಖ್ಯ ಪಾತ್ರ ವಹಿಸಿ ದಂತಾಗುತ್ತದೆ ಈ ದಿಶೆಯಲ್ಲಿ ವಿದ್ಯಾವಂತ ಯುವಕರು ಮುಂದಾಗ ಬೇಕು ಎಂದು ಯರನಾಳದ ಸಂಗನಬಸವ ಶ್ರೀಗಳು ಹೇಳಿದರು.ತಾಲೂಕಿನ ಲಚ್ಯಾಣ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಶಂಕರಲಿಂಗ ಜಾತ್ರಾ ಮಹೋತ್ಸವ ಮತ್ತು ಹನುಮಾನ ಗುಡಿಯ ಕಳಸಾ ರೋಹಣ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಾಲ ಶೂಲ ಮಾಡಿ ದುಂದು ವೆಚ್ಚ ಮಾಡದೇ ಯಾವುದೇ ಜಾತಿ ಮತ ಪಂಥ ಎನ್ನದೇ ಹತ್ತಾರು ಪೂಜ್ಯರು ಸಾವಿರಾರು ಜನರು, ರಾಜಕೀಯ ಮುತ್ಸದ್ದಿಗಳು ಮತ್ತು ಸತ್ಪುರುಷರ ಬಂಧು ಬಳಗ ಮಧ್ಯೆ ನಡೆಯುವ ವಿವಾಹ ಶ್ರೇಷ್ಠ ಮದುವೆ ಎಂದರು. ನಿವೃತ್ತ ಪ್ರಾಚಾರ್ಯ ಎ.ಪಿ ಕಾಗವಾಡಕರ, ಹಣಮಂತ ಕಾಗವಾಡ ಮಾತನಾಡಿದರು. ಇದೇ ವೇಳೆ ಸಾಮೂಹಿಕ ವಿವಾಹ ವಧು ವರರಿಗೆ ಬಟ್ಟೆ ಸೇವೆ ನೀಡಿದ ಶ್ರೀಮತಿ ಮಂಗಲಾಬಾಯಿ ಶ್ರೀ ಜೀವನದಾಸ ಶಹಾ ದಂಪತಿಗಳ ಸ್ಮರಣಾರ್ಥ ಜವಾಹರ ಶಹಾ, ವಧುವಿಗೆ ತಾಳಿ ರೂಪದಲ್ಲಿ ಬಂಗಾರ ಸೇವೆ ನೀಡಿದ ಶಿವಾನಂದ ಪತ್ತಾರ, ಮೌನೇಶ ಪತ್ತಾರ, ಸಂಕೇತ ಅರ್ಜುಣಗಿ, ನಾಗೇಶ ಪತ್ತಾರ ಇವರನ್ನು, ಕಳಸದ ಭಕ್ತಿ ಸೇವೆ ಮಾಡಿದ ರಾಮಚಂದ್ರ ನಾಗಣಸೂರ ಇವರನ್ನು ಸನ್ಮಾನಿಸಲಾಯಿತು.ವೇದಿಕೆಯ ಮೇಲೆ ಹಳಂಗಳಿಯ ಶಿವಾನಂದ ಶ್ರೀಗಳು, ತುಂಗಳದ ಮಾತೋಶ್ರೀ ಅನುಸೂಯಾ ಅಮ್ಮನವರು, ಹೂವಿನ ಹಿಪ್ಪರಗಿಯ ದ್ರಾಕ್ಷಾಯಿಣಿ ಅಮ್ಮನವರು, ಚಿಕ್ಕ ಪಡಸಲಗಿಯ ಅಕ್ಕಮಹಾದೇವಿ ಅಮ್ಮನವರು, ಬಸವಂತರಾಯ ಗೌಡ ಪಾಟೀಲ, ಸಂಸ್ಥೆಯ ಎಂ.ಕೆ ಬಿರಾದಾರ ಇದ್ದರು. ಇದಕ್ಕೂ ಮೊದಲು ಪೂಜ್ಯ ಶ್ರೀ ಸಿದ್ದಲಿಂಗ ದೇವರು ಇವರಿಂದ ಹನುಮಾನ ಗುಡಿಯ ಕಳಸಾ ರೋಣ ನಡೆಯಿತು.28 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button