ವ್ಯಾಕುಲತೆಯ ಕರೆಗೆ ದೇವರ ದರ್ಶನ – ಮಾತಾಜೀ ಜ್ಯೋತ್ಸ್ನಾಮಯೀ.

ಚಳ್ಳಕೆರೆ ಜೂ.07

ದೇವರನ್ನು ಪರಮ ವ್ಯಾಕುಲತೆಯಿಂದ ಕರೆದರೆ ಅವನ ದರ್ಶನ ಭಾಗ್ಯ ಸುಲಭವಾಗಿ ಸಿಗುತ್ತದೆ ಎಂದು ಕನಕಪುರ ಹಾಗೂ ಚೆನ್ನಪಟ್ಟಣದ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ಜ್ಯೋತ್ಸ್ನಾಮಯೀ ಹೇಳಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಹಮ್ಮಿಕೊಂಡಿದ್ದ ವಾರದ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಶ್ರೀರಾಮಕೃಷ್ಣರಂತೆ ನಾವು ಸರಳತೆ, ವಿನಯವಂತಿಕೆ, ಮುಗ್ಧತೆಯನ್ನು ಬೆಳೆಸಿ ಕೊಳ್ಳಬೇಕು. ಸರಳ ಜೀವನ ಕ್ರಮ ಉತ್ತಮ ಬದುಕಿಗೆ ಸೋಪಾನವಾಗುತ್ತದೆ.

ಆದ್ದರಿಂದ ಮಹಾತ್ಮರ ಜೀವನದ ಸದ್ಗುಣಗಳು ಸಾರ್ಥಕ ಬದುಕಿಗೆ ದಾರಿ ದೀಪವಾಗಿವೆ ಆದ್ದರಿಂದ ಅವುಗಳ ಅನುಸರಣೆ ಮಾಡಬೇಕು ಎಂದು ತಿಳಿಸಿದರು. ಈ ಸತ್ಸಂಗದ ಆರಂಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ ಮತ್ತು ಆರತಿ ನಡೆಯಿತು. ಸತ್ಸಂಗ ಸಭೆಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಹೂವಿನ ಲಕ್ಷ್ಮೀದೇವಮ್ಮ, ಸಂಧ್ಯಾ ಸುಧಾಕರ್, ಜಿ ಯಶೋಧಾ ಪ್ರಕಾಶ್, ಗೀತಾ ವೆಂಕಟೇಶ್ ರೆಡ್ಡಿ, ಅಭಿಲಾಷ್, ಅನ್ವಿಕಾ, ಮಮತ ಕೃಷ್ಣ, ಯತೀಶ್.ಎಂ ಸಿದ್ದಾಪುರ, ಸಿ.ಎಸ್ ಭಾರತಿ, ಮಂಜುಳ ಉಮೇಶ್, ಋತಿಕ್, ಸುರೇಶ್, ಪಂಕಜ ಚೆನ್ನಪ್ಪ, ಪುಷ್ಪಲತಾ, ಸುಮನ ಕೋಟೇಶ್ವರ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button