ಆಲಗೂರ ಸಿಡಿಲಿನ ಹೊಡೆತಕ್ಕೆ – 23 ಕುರಿಗಳು ಸಾವು.
ಆಲಗೂರ ಮೇ.13

ದೇವರ ಹಿಪ್ಪರಗಿ ಸಿಡಿಲು ಬಡೆದು 23 ಕುರಿಗಳನ್ನು ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಆಲಗೂರ ಗ್ರಾಮದಲ್ಲಿನ ಹೊಲದಲ್ಲಿ ಸೋಮವಾರ ಸಂಜೆಯ ವೇಳೆ ನಡೆದಿದೆ, ಭೀಮಣ್ಣ ಜನಪ್ಪಗೋಳ ಎಂಬವರು ಕುರಿಗಳನ್ನು ಸಾವನ್ನಪ್ಪಿವೆ. ಸೋಮವಾರ ಸಂಜೆಯ ಸಮಯದಲ್ಲಿ ಗುಡುಗು ಸಿಡಿಲು ಮಿಂಚಿನ ಕಾಣಿಸಿ ಕೊಂಡಿತು ಅದೇ ಸಮಯದಲ್ಲಿ ಸಿಡಿಲು ಬಿದ್ದಿದೆ ಎಂದು ತಿಳಿದು ಬಂದಿದೆ.

ಕುರಿಗಳು ಸಾವನ್ನಪ್ಪಿದ ಬಡ ರೈತನಾದ ಭೀಮಣ್ಣ ಜನಪ್ಪಗೋಳ ಕಂಗಾಲಾಗಿದ್ದು, ಬಡವನ ಬದುಕಿಗೆ ಆಸರೆ ಯಾದ ಕುರಿಯನ್ನು ಕೆಳೆದು ಕೊಂಡು ಸಂಕಟದಲ್ಲಿ ಬಳಲುತ್ತಿರುವ ರೈತನಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಗಳು ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ