ಬೇಡ ಜಂಗಮರು ಪರಿಶಿಷ್ಟ ಜಾತಿ ಗಣತಿಯ ಸಮೀಕ್ಷೆಯಲ್ಲಿ ಸೇರ್ಪಡೆ ಯಾಗದಂತೆ – ತಡೆಗಟ್ಟಲಿಕ್ಕಾಗಿ ಛಲವಾದಿ ಮಹಾಸಭಾದ ಒತ್ತಾಯ.
ಬಳ್ಳಾರಿ ಮೇ.13

ಒಳ ಮೀಸಲಾತಿ ಕಲ್ಪಿಸಲು ಪರಿಶಿಷ್ಟ ಜಾತಿಗಳ ಮೊದಲ ಹಂತದ ಸಮೀಕ್ಷೆಯು ಮೇ 5 ರಿಂದ 17ರ ವರೆಗೆ ನಡೆಯಲಿದೆ. ಸಮೀಕ್ಷೆ ವೇಳೆ ವೀರಶೈವ ಜಂಗಮರು ಬೇಡ ಜಂಗಮ ಎಂಬುದಾಗಿ ಬರೆಯಿಸಿ, ಪರಿಶಿಷ್ಟ ಜಾತಿಯಲ್ಲಿ ಸೇರುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆಯಲ್ಲಿ ವೀರಶೈವ ಜಂಗಮರನ್ನು ಬೇಡ ಜಂಗಮರೆಂದು ಪರಿಗಣಿಸ ಬಾರದು ಎಂದು ಛಲವಾದಿ ಮಹಾಸಭಾ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ.ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತರು ಬೇಡ ಜಂಗಮ ಸಮುದಾಯ ಎಂದು ಸೇರ್ಪಡೆ ಯಾಗುತ್ತಿದ್ದು ಈ ಸಮುದಾಯವನ್ನು ದಾಖಲಿಕರಣ ಮಾಡಬಾರದು ಬೇಡ ಜಂಗಮ ಹೆಸರಿನ ನೆಪದಲ್ಲಿ ನಮ್ಮ ಪರಿಶಿಷ್ಟ ಜಾತಿಗಳ ಸಮುದಾಯಗಳ ಹಕ್ಕನ್ನು ಕಬಳಿಸಲು ಯತ್ತಿಸುತ್ತಿದ್ದಾರೆ.ಇಂದಿನಿಂದ ಪರಿಶಿಷ್ಟ ಜಾತಿ ಸಮೀಕ್ಷೆ ಹಿನ್ನೆಲೆ ಜಿಲ್ಲಾಡಳಿತನೈಜ ಬೇಡ ಜಂಗಮರು ಅಲೆಮಾರಿಗಳು, ಅರಣ್ಯ ವಾಸಿಗಳು, ಮಾಂಸ ಹಾರಿಗಳಾಗಿರುತ್ತಾರ ಜಿಲ್ಲೆಯಲ್ಲಿ ವೀರಶೈವ ಜಂಗಮರು ಮಕ್ಕಳ ಶಾಲೆ ದಾಖಲಾತಿಗಳಲ್ಲಿ ಬೇಡ ಜಂಗಮ ಎಂದು ಬರೆಯಿಸಿದ್ದಾರೆ.ಒಳ ಮೀಸಲಾತಿ ಕಲ್ಪಿಸಲು ಪರಿಶಿಷ್ಟ ಜಾತಿಗಳ ಮೊದಲ ಹಂತದ ಸಮೀಕ್ಷೆಯು ಮೇ 5 ರಿಂದ 17ರ ವರೆಗೆ ನಡೆಯಲಿದೆ. ಸಮೀಕ್ಷೆ ವೇಳೆ ವೀರಶೈವ ಜಂಗಮರು ಬೇಡ ಜಂಗಮ ಎಂಬುದಾಗಿ ಬರೆಯಿಸಿ, ಪರಿಶಿಷ್ಟ ಜಾತಿಯಲ್ಲಿ ಸೇರುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆಯಲ್ಲಿ ವೀರಶೈವ ಜಂಗಮರನ್ನು ಬೇಡ ಜಂಗಮರೆಂದು ಪರಿಗಣಿಸ ಬಾರದು ವೀರಶೈವ ಜಂಗಮರನ್ನು ಬೇಡ ಜಂಗಮರೆಂದು ಪರಿಶಿಷ್ಟ ಜಾತಿಯಲ್ಲಿ ದಾಖಲಿಸುವ ಅಪಾಯವಿರುವ ಹಿನ್ನೆಲೆಯಲ್ಲಿ ಅದಕ್ಕೆ ನ್ಯಾಯಮೂರ್ತಿ ನಾಗಮೋಹನ ದಾಸ್ ಏಕ ಸದಸ್ಯ ವಿಚಾರಣಾ ಆಯೋಗವು ಅವಕಾಶ ನೀಡಬಾರದು. ಪರಿಶಿಷ್ಟ ಜಾತಿಗಳ ಸಮೀಕ್ಷೆ ವೇಳೆ ವೀರಶೈವ ಲಿಂಗಾಯತ ಜಂಗಮರ ಪೈಕಿ ಕೆಲವರು ಬೇಡ ಜಂಗಮ ಎಂಬುದಾಗಿ ಬರೆಯಿಸಿ, ಅಕ್ರಮವಾಗಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರುವ ಅಪಾಯವಿದೆ. ಅದನ್ನು ತಡೆಯಬೇಕು ಜಿಲ್ಲಾಡಳಿತ ಮೂಲಕ ಆಯೋಗಕ್ಕೆ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ವೀರಶೈವ ಜಂಗಮರು ಈಗಾಗಲೇ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಬೇಡ ಜಂಗಮ ಎಂಬುದಾಗಿ ಬರೆಯುಸುತ್ತಿದ್ದಾರೆ ಅದೇ ರೀತಿ ಅನೇಕರು ಬೇಡ ಜಂಗಮ ಎಂಬುದಾಗಿ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದಿರುವ ಪ್ರಕರಣಗಳೂ ಜಗ ಜ್ಜಾಹೀರಾಗಿವೆ. ನೈಜವಾದ ಬೇಡ ಜಂಗಮರು ಅಲೆಮಾರಿಗಳಾಗಿದ್ದು, ಅರಣ್ಯ ವಾಸಿಗಳಾಗಿರುತ್ತಾರೆ. ಅಂತಹ ಬೇಡ ಜಂಗಮರು ಮಾಂಸಾ ಹಾರಿಗಳಾಗಿರುತ್ತಾರೆ. ವೀರಶೈವ ಜಂಗಮರು ವೀರಶೈವರಿಗೆ ಗುರುಗಳಾಗಿದ್ದು, ಆರ್ಥಿಕವಾಗಿ ಸ್ಥಿತಿವಂತರಾಗಿದ್ದಾರೆ. ಜನವಸತಿ ಪ್ರದೇಶಗಳ ನಿವಾಸಿಗಳಾಗಿರುತ್ತಾರೆ. ಒಂದೊಮ್ಮೆ ವೀರಶೈವ ಜಂಗಮರು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿದರೆ ಪುನಾ: ಅಸ್ಪೃಶ್ಯ ಸಮುದಾಯಗಳಿಗೆ ತೀವ್ರ ಅನ್ಯಾಯವಾಗಲಿದೆ. ಆದ್ದರಿಂದ ಗಣತಿದಾರರು ಯಾವುದೇ ಕಾರಣಕ್ಕೂ ವೀರಶೈವ ಜಂಗಮರನ್ನು ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಪರಿಗಣಿಸ ಬಾರದು. ಈ ಬಗ್ಗೆ ಆಯೋಗವೂ ಜಿಲ್ಲಾಡಳಿತ, ಗಣತಿದಾರರಿಗೆ ಸೂಕ್ತ ನಿರ್ದೇಶನ ನೀಡಬೇಕು ಆದರೂ ಗಣತಿದಾರರಿಗೆ ಸೂಕ್ತ ಸೂಚನೆ, ಮಾರ್ಗದರ್ಶನ ನೀಡಲು ಗಣತಿದಾರರು ಯಾವುದೇ ಕಾರಣಕ್ಕೂ ವೀರಶೈವ ಜಂಗಮರನ್ನು ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಪರಿಗಣಿಸ ಬಾರದು ಎಂದು ಛಲವಾದಿ ಮಹಾಸಭಾ ಜಿಲ್ಲಾ ಸಮಿತಿ ಬಳ್ಳಾರಿ ಈ ಮೂಲಕ ಪತ್ರಿಕಾ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸುತ್ತಿರುವ ಸಂಘಟನಗಾರರು ಸಿ.ಶಿವಕುಮಾರ ಜಿಲ್ಲಾ ಅಧ್ಯಕ್ಷರು, ಕೆ ಶಂಕರ್ ನಂದಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಸಿ.ಹನುಮೇಶ್ ಕಟ್ಟಿಮನಿ ಜಿಲ್ಲಾ ಕಾರ್ಯಧ್ಯಕ್ಷರು ಕರ್ನಾಟಕ ದಲಿತ ರಕ್ಷಣಾ ವೇದಿಕೆ, ಮಾನಯ್ಯ.ಬಿ ಗೋನಾಳ್ ಜಿಲ್ಲಾ ಉಪಾಧ್ಯಕ್ಷ ಛಲವಾದಿ ಮಹಾಸಭಾ, ಛಲವಾದಿ ಲೋಕೇಶ್ ಕಪಗಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಡಿ.ವೆಂಕಟೇಶ್ ಜಿಲ್ಲಾ ಜಂಟಿ ಕಾರ್ಯದರ್ಶಿ ಛಲವಾದಿ ಮಹಾಸಭಾ, ಮಲ್ಲಿಕಾರ್ಜುನ.ಬಿ ಗೋನಾಳ್ ಛಲವಾದಿ ಮುಖಂಡರು, ಜಯರಾಮ ಛಲವಾದಿ ಮುಖಂಡರು.