ಇಬ್ಬರು ಪಿಡಿಒ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸದ – ಇ.ಓ ಖಾಲಿದ್ ಅಹ್ಮದ್.

ಮಾನ್ವಿ ಮೇ.12

ಒಂದು ಕಾಮಗಾರಿಗೆ ಮೀಸಲಿಟ್ಟ ಹಣವನ್ನು ಅನ್ಯ ವಿಷಯಕ್ಕೆ ಹಣ ಬಳಕೆ ಮಾಡಿ ಕೊಳ್ಳುವುದು ಅಪರಾಧ ಎಂದು ಸರಕಾರದ ಸುತ್ತೋಲೆ ಇದೆ. ಆದರೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ 2022-23 ನೇ. ಸಾಲಿನಲ್ಲಿ ಸಾದಾಪುರ ಪಂಚಾಯತಿ ಪಿಡಿಓ ಆಗಿ ಸೇವೆ ಸಲ್ಲಿಸಿದ ಶಿವಗೇನಿ 9 ಲಕ್ಷ 62 ಸಾವಿರ ಹಣ ದುರ್ಬಳಕೆ ಮಾಡಿ ಕೊಂಡಿರುವ ಆರೋಪ ಕೇಳಿ ಬಂದಿದೆ.

2022-23 ನೇ. ಸಾಲಿನಲ್ಲಿ ನೆರೆ ಹಾವಳಿ ಬಂದ ಹಿನ್ನೆಲೆಯಲ್ಲಿ ಮಾನ್ವಿ ತಾಲೂಕಿನ ಚಿಕ್ಕಕೊಟ್ನೇಕಲ್ ಮತ್ತು ಸಾದಾಪುರ ಪಂಚಾಯತಿ ವ್ಯಾಪ್ತಿಯ ಅಂಗನವಾಡಿ, ಸರಕಾರಿ ಶಾಲೆ ಹಾಗೂ ಆರೋಗ್ಯ ಕೇಂದ್ರಗಳನ್ನು ರಿಪೇರಿ ಮಾಡುವ ಸಲುವಾಗಿ ರಾಯಚೂರು ಪಂಚಾಯತಿ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ ಟೆಂಡರ್ ಕರೆಯಲಾಗಿತ್ತು. ಗುತ್ತೇದಾರ ಬಸನಗೌಡ ಅವರು ಕಾಮಗಾರಿ ಜವಾಬ್ದಾರಿ ವಹಿಸಿ ಕೊಂಡಿದ್ದಾರೆ.

ಗುತ್ತೇದಾರ ಬಸನಗೌಡ ಅವರು ಕಳೆದ ಒಂದು ವರ್ಷದಿಂದ ಮಾನ್ವಿ ತಾಲೂಕ ಪಂಚಾಯತಿ ಇ.ಓ ಖಾಲಿದ್ ಅಹ್ಮದ್ ಹತ್ತಿರ ಅಲೆದಾಡಿದರು ಸಹ ಈ ಹಿಂದೆ 2022-23 ನೇ. ಸಾಲಿನಲ್ಲಿ ಚಿಕ್ಕಕೊಟ್ನೇಕಲ್ ಹಾಗೂ ಸಾದಾಪುರ ಪಂಚಾಯತಿಯಲ್ಲಿ ಸೇವೆ ಸಲ್ಲಿಸಿದ ಇಬ್ಬರು ಪಿಡಿಓ ವಿರುದ್ಧ ಹಣ ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು ಎಂದು ರಾಯಚೂರು ಜಿಲ್ಲಾ ಪಂಚಾಯತಿ ಸಿಇಓ ಅವರು ಸೂಚಿಸಿದರು ನಮಗೆ ಯಾವುದೇ ನ್ಯಾಯ ಸಿಕ್ಕಿಲ್ಲ ಎಂದು ಗುತ್ತೇದಾರ ಬಸನಗೌಡ ಆರೋಪಿಸಿದ್ದಾರೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button