ತಾಲೂಕ ಪಂಚಾಯತಿ ಇ.ಓ ಖಾಲಿದ್ ಅಹ್ಮದ್ ರ – ಅಂಧಾ ದರ್ಬಾರ್.
ಗೋರ್ಕಲ್ ಮೇ.16

ಸರಕಾರದ ಹಣ ಯಾವ ರೀತಿ ಲೂಟಿ ಮಾಡಬೇಕು ಎಂದು ಮಾನ್ವಿ ತಾಲೂಕಿನ ಗೋರ್ಕಲ್ ಗ್ರಾಮ ಪಂಚಾಯತಿಯಲ್ಲಿ ಕಾಮಗಾರಿ ಮಾಡದೆ ಹಣ ಲೂಟಿ ಮಾಡಿರುವುದು ಬೆಳಕಿಗೆ ಬಂದಿದ್ದು, ಪಿಡಿಓ ಅಕ್ತರ್ ಪಾಶ್ ಗೆ ಹಾಗೂ ತಾಲೂಕ ಪಂಚಾಯತಿ ಇ.ಓ ಖಾಲಿದ್ ಅಹ್ಮದ್ ಸಾಹೇಬ್ರಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಗೋರ್ಕಲ್ ಗ್ರಾಮ ಪಂಚಾಯತಿಯ ಜನರು ಸೌಲಭ್ಯಗಳಿಲ್ಲದೆ ನರಳಾಡುತ್ತಿದ್ದು, ವೆಂಕೋಬನ ಮನೆಯಿಂದ ಕುರಿ ಹನುಂತನ ಮನೆವರೆಗೂ ಚರಂಡಿ ಹಾಗೂ ಸ್ಲ್ಯಾಬ್ ಹಾಕುತ್ತೇವೆಂದು ಲಕ್ಷಾಂತರ ಹಣ ಕಾಮಗಾರಿ ಮಾಡದೆ ಲೂಟಿ ಮಾಡಲಾಗಿದ್ದು. ಸಾರ್ವಜನಿಕರಂತು ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಪಿಡಿಓ ಅಕ್ತರ್ ಪಾಶ್ ಅವರ ದುರಾಡಳಿತ ಹಾಗೂ ಮಾನ್ವಿ ತಾಲೂಕ ಪಂಚಾಯತಿ ಇ.ಓ ಖಾಲಿದ್ ಅಹ್ಮದ್ ಅವರ ದುರಾಡಳಿತ ದಿಂದಾಗಿ ಮಾನ್ವಿ ತಾಲೂಕಿನ ಗೋರ್ಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳು ಅಭಿವೃದ್ಧಿ ಯಾಗದೆ ಜನರಂತು ಸೌಲಭ್ಯಗಳಿಂದ ವಂಚಿತರಾಗಿ ಜೀವನ ಕಳೆಯುತ್ತಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ