“ಬದುಕು ಬರಹದ ಸಿಹಿ ಕ್ಷಣಗಳು”….

ಬದುಕು ಬರಹ ನಾಣ್ಯದ ಎರಡು ಮೂಖ
ಬದುಕು ನೈಜತೆ ಸರಳತೆಯ ಮೆರಗು
ಬರಹ ಶುದ್ಧತೆ ಸ್ಪಷ್ಟತೆಯ ಮಹತ್ವ
ಬದುಕು ನಿಶ್ಚಿಂತ ನಿಸ್ವಾರ್ಥತೆಯ ಬೆಳಕು
ಬರಹ ಕವಿ ಹೃದಯದ ಅನುಭವದ
ಅಕ್ಷರ ಗುಚ್ಛದ ಹೊಳಪು
ಬದುಕು ತನ್ನವರಿಗಾಗಿ ತನು ಮನ ಸವಿತ
ಬರಹ ಬದುಕಿನ ವರ್ಣ ರಂಜಿತ
ಬದುಕು ತನಗಾಗಿದ್ದರೂ
ನಂಬಿದವರಿಗೆ ಅಧಿಕತಮ
ಬರಹ ಸಂಸ್ಕಾರ ಸಂಸ್ಕೃತಿ
ಬೆಳಸುವ ಕಲಾತೀತ
ಬದುಕು ಜೀವನವು ಅಪರಂಜಿ ತರಹ
ಬರಹ ಸಮಾಜಮುಖಿ ಸ್ನೇಹ ಬಂಧು
ಬದುಕು ಸುಖ ದುಃಖ ಸಮ್ಮಿಲನ
ಕ್ಷಣ ಸವಿಯುವ ಮನತುಡಿತದ ಕುಣಿತ
ಬರಹ ಜೀವನದ ನೈಜ ಚಿತ್ರಿತ
ಬದುಕು ಗೆಲುವು ಸೋಲು ಸಹಜ
ಬದುಕು ಸೂರ್ಯಾಸ್ತದ ಸಮಯ
ಶೂನ್ಯ ಭಾವಬಂಧ
ಬರಹ ಪ್ರಸ್ತುತ ಜನಮನದ ನಿಜತನ
ಬದುಕು ಸಾರ್ಥಕತೆಯ ಕರ್ಮಫಲ
ಅನುರೂಪ ಅಪರೂಪ
ಬರಹ ಬದುಕಿನ ತಮದಿಂದ
ಬೆಳಕಿನಡೆಗೆ
ಸಾಗಿಸುವ ಸುದರ್ಶನ ಚಕ್ರ
“ಬದುಕು ಬರಹದ ಸಿಹಿ ಕ್ಷಣಗಳು”
ಮಾನವನ ವರ್ಣರಂಜಿತ ತೆರೆಮೆರೆ
-ಶ್ರೀ ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟ.