ಡೆಂಗ್ಯೂ ತಡೆ ಪರಿಶೀಲಿಸಿ, ಸ್ವಚ್ಛಗೊಳಿಸಿ ನೀರಿನ ಸಂಗ್ರಹ ಮುಚ್ಚಿಡಿ – ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿ.

ಬೆನಕಟ್ಟಿ ಮೇ.22

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳು ಬಾಗಲಕೋಟ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಹಾಗೂ ಮೇಲ್ಬ್ರೊ ಸುಗರ್ ಪ್ಯಾಕ್ಟರಿ ಸಹಯೋಗದಲ್ಲಿ “ಡೆಂಗ್ಯೂ ಚಿಕೂನ್ ಗುನ್ಯಾ ರೋಗ ತಡೆ ಮುಂಜಾಗ್ರತೆ ಆರೋಗ್ಯ ಅರಿವು ಜಾಗೃತಿ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು, ಡೆಂಗ್ಯೂ, ಚಿಕೂನ್ ಗುನ್ಯಾ ರೋಗ ಸೋಲಿಸಲು ನೀರಿನ ಸಂಗ್ರಹಗಳ ಪರೀಶೀಲನೆ, ಸ್ವಚ್ಛ ಗೊಳಿಸುವುದು, ಮುಚ್ಚಿಡಿವುದು ಎಂಬ ಘೋಷ ವಾಕ್ಯಯೊಂದಿಗೆ, ಸೊಳ್ಳೆಗಳ ಕಚ್ಚುವಿಕೆ ಯಿಂದ ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ, ಮೆದಳು ಜ್ವರ, ಆನೆಕಾಲು ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡುವವು, ಡೆಂಗ್ಯೂ ಚಿಕೂನ್ ಗುನ್ಯಾ ರೋಗವು “ಈಡಿಸ್ ಈಜಿಪ್ತೆ” ಸೊಳ್ಳೆಗಳು ಸಂಗ್ರಹಿಸಿದ ಸ್ವಚ್ಛವಾದ ನೀರಿನಲ್ಲಿ ಲಾರ್ವಾ ಉತ್ಪತ್ತಿಯಾಗಿ ಸೊಳ್ಳೆಗಳು ಹಗಲಿನಲ್ಲಿ ಕಚ್ಚುವುದು, ಮನೆ ಸುತ್ತ ಮುತ್ತ ಟೆಂಗಿನ ಚಿಪ್ಪು, ಒಡೆದ ಬಾಟಲ್, ಟಾಯರ್ ಟ್ಯೂಬ್, ಕೂಲರ್ ಫ್ರೀಜ್ ನೀರಿನ ಸಂಗ್ರಹ ಸ್ವಚ್ಛತಾ ಗೊಳಿಸಿ, ಲಾರ್ವಾ ಉತ್ಪತ್ತಿ ತಡೆಯಬೇಕು.

ನೀರಿನ ಸಂಗ್ರಹಗಳ ಮೇಲೆ ತಪ್ಪದೇ ಮುಚ್ಚಳಿಕೆ ಹಾಕಬೇಕು. ನಿಶ್ಯಕ್ತಿ ವಿಪರೀತ ಜ್ವರ, ತಲೆನೋವು, ಯಾವುದೇ ತರಹ ಜ್ವರ ಕಾಣಿಸಿದರೆ ನಿರ್ಲಕ್ಷ್ಯ ಬೇಡ ಹತ್ತಿರದ ಸರಕಾರಿ ಆಸ್ಪತ್ರೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಸಲಹೆ ಪಡೆಯಬೇಕು, ಹೊರ ರಾಜ್ಯಗಳಿಂದ ಬಂದ ಕಾರ್ಮಿಕರಿಗೆ ಆರೋಗ್ಯ ಸಮಸ್ಯೆಗಳಿದ್ದವರ ಸಂಶಯುತ ಮಲೇರಿಯಾ ರಕ್ತ ಲೇಪನ ಸಂಗ್ರಹಿಸಲಾಯಿತು. ಡೆಂಗ್ಯೂ ಜಾಗೃತಿ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು, ಮೆಲ್ಬ್ರೊಸುಗರ್ ಫ್ಯಾಕ್ಟರಿಯ ಸಹ ವ್ಯವಸ್ಥಾಕರಾದ ಮುತ್ತುರಾಜ ಗುಳೇದಗುಡ್ಡ, ಸ್ಯಾನಿಟರಿ ಇನ್ಸ್ಪೆಕ್ಟರ್ ವಿವೇಕಾನಂದ ಗದಗಿಮಠ, ದ್ಯಾಮಣ್ಣ ಶಿ ತಳಕೇರಿ, ಶೇಖರ್ ಹನುಮಾರ್ ಶ್ರೀನಿವಾಸ್ ಪಿ ಎಡಕೆ, ಜಿ ಎಸ್ ಗಣಾಚಾರಿ, ಎ ಬಿ ಮೇಲಗಿರಿ, ಎಮ್ ಎ ನದಾಫ್, ಪ್ರದೀಪ ಬಾತಮರೆ, ರಾಜು ಬಾಸಿಂಗೆ, ಮಾಯಪ್ಪ ಯಲ್ಲೂರಕರ, ಆಶಾ ಕಾರ್ಯಕರ್ತೆಯರು, ಕಾರ್ಮಿಕರು ಭಾಗವಹಿಸಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button