ಬಸವ ಪಂಚಮಿ ಸಾಮೂಹಿಕ ಇಷ್ಟಲಿಂಗ ಪೂಜೆ – ಬಸವಜಯ ಮೃತ್ಯುಜಯ ಶ್ರೀಗಳು.
ಇಲಕಲ್ಲ ಆ.30

ಲಿಂಗಾಯತ ಪಂಚಮಸಾಲಿ ಮಹಾಪೀಠ ಕೂಡಲ ಸಂಗಮದಲ್ಲಿ ಬಸವಣ್ಣನವರ ಲಿಂಗೈಕ್ಯ ದಿನವನ್ನುಬಸವ ಪಂಚಮಿ ದಿನವನ್ನಾಗಿ ಆಚರಿಸುತ್ತಾ ಬಂದಿದ್ದೇವೆ ಎಂದು ಲಿಂಗಾಯತ ಪಂಚಮಸಾಲಿ ಮಹಾಪೀಠ ಕೂಡಲ ಸಂಗಮದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳು ಇಳಕಲ್ ನಗರದ ಅಪ್ಪಾಜಿ ರೋಡ್ ಲೈನ್ಸ ಕಚೇರಿಯಲ್ಲಿ ಕರೆಯಲಾದ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ಕೂಡಲ ಸಂಗಮದಲ್ಲಿ ಸೆ 1 ರಂದು ಬಸವ ಪಂಚಮಿ ದಿನ ದಂದು ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡಲಾಗುತ್ತದೆ. ವಿಶೇಷವಾಗಿ ಮೀಸಲಾತಿಗಾಗಿಹೋರಾಡಿದ ಪ್ರಮುಖರನ್ನು, ಪಂಚಸೈನ್ಯದ ಎಲ್ಲಾ ಪದಾಧಿಕಾರಿಗಳಿಗೆ ಲಿಂಗದೀಕ್ಷೆ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. 2 ಎ. ಮೀಸಲಾತಿಗಾಗಿ ಸಂಕಲ್ಪ ಮಾಡಿ ಭಗವಂತನ ಕೂಗಿ ಸಮಾಜದ ಹೋರಾಟಗಾರರಿಗೆ ರುದ್ರಾಕ್ಷಿ ಕಂಕಣ ಕಾರ್ಯಕ್ರಮ ಜರುಗುವುದು. ಈ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಸರ್ ಸಿದ್ದಪ್ಪ ಕಂಬಳಿ ಅವರ ಸ್ಮರಣಾರ್ಥವಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಸವ ಪಂಚಮಿ ದಿನಂದು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ದ್ವೀತಿಯ ವರ್ಷ ಪರೀಕ್ಷೆಯಲ್ಲಿ ಸಮಾಜದ ವಿದ್ಯಾರ್ಥಿಗಳು 90 ರಷ್ಟು ಅಂಕ ಪಡೆದವರನ್ನು ಸತ್ಕರಿಸಿ ಗೌರವಿಸ. ಲಾಗುವುದು ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷರು, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ವಿಜಯನಂದ ಎಸ್.ಕಾಶಪ್ಪನವರು ವಹಿಸಲಿದ್ದಾರೆ. ನಾಡಿನ ಜನತೆಯು ಇದೆ ಆಮಂತ್ರಣ ವೆಂದು ಭಾವಿಸಿ ಹೆಚ್ಚಿನ ಸಂಖೆಯಲ್ಲಿ ಭಾಗವಹಿಸ ಬೇಕು ಎಂದು ಪಾದಯಾತ್ರೆ ಪ್ರವರ್ತಕ ಶ್ರೀ ಬಸವಜಯ ಮೃತ್ಯುಂಜಯ ಮಹಾ ಸ್ವಾಮಿಗಳು ಪ್ರತಿಕಾ ಹೇಳಿಕೆಯಲ್ಲಿ ತಿಳಿಸಿದರು. ಇದೇ ಸಂದರ್ಭದಲ್ಲಿ ತಾಲೂಕಾ ಪಂಚಮಸಾಲಿ ಅಧ್ಯಕ್ಷ ಮಹಾಂತಗೌಡ ಪಾಟೀಲ (ಜೆಎಂಇ) ಪ್ರಧಾನ ಕಾರ್ಯದರ್ಶಿ ಹುಚ್ವಪ್ಪ ಐಹೊಳೆ, ನೌಕರ ಸಂಘದ ಅಧ್ಯಕ್ಷ ಸಂಗಮೇಶ ಬಂಗಾರಿ, ಕಾರ್ಯದರ್ಶಿ ಮುತ್ತಣ್ಣ ಬಿಳಗಿ,ಪರಶುರಾಮ ಮೂಲಿಮನಿ,ಮುತ್ತು ಬಂಡರಗಲ್,ಗಣೇಶ ಶೆಟ್ಟರ, ಬಸು ಪಾಟೀಲ, ಮಹಾಂತೇಶ ಬಿಳಗಿ, ಮಹಾಂತೇಶ ಭಮಸಾಗರ ಮತ್ತಿತರರು ಸುದ್ದಿ ಗೋಷ್ಠಿಯಲ್ಲಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.