ಹಿಂದು ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ಹಜರತ್ ರಹಿಮಾನ ಶ್ಯಾವಲಿ ಶರಣರ – ದರ್ಗಾದ ಉರುಸ್.

ನರೇಗಲ್ಲ ಮೇ.23

ಗಜೇಂದ್ರಗಡ ತಾಲೂಕಿನ ನರೇಗಲ್ಲಿನ ಹಿಂದು ಮುಸ್ಲಿಂ ಭಾವೈಕ್ಯಕ್ಕೆ ಹೆಸರಾಗಿರುವ ಪಟ್ಟಣದ ಹಜರತ್ ರಹಿಮಾನ ಶ್ಯಾವಲಿ ಶರಣರ ದರ್ಗಾದ ಉರುಸ್ ಗುರುವಾರ ಸಂಭ್ರಮದಿಂದ ಜರುಗಿತು.ದರ್ಗಾದಿಂದ ಆರಂಭವಾದ ಈ ಮೆರವಣಿಗೆ ದ್ಯಾಮಮ್ಮನ ಗುಡಿ, ಗದಗ ರಸ್ತೆ, ಪಟ್ಟಣ ಪಂಚಾಯಿತಿ ರಸ್ತೆ, ಹೊಸ ಬಸ್ ನಿಲ್ದಾಣ, ಜಕ್ಕಲಿ ಕ್ರಾಸ್, ಹಳಿ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಕಲಾ ತಂಡಗಳು ಭಾಗವಹಿಸಿ ಮೆರುಗು ಹೆಚ್ಚಿಸಿದ್ದವು.ಹೊಸ ಬಸ್ ನಿಲ್ದಾಣದಿಂದ ಲಕ್ಷ್ಮಮ್ಮನ ಪಾಲಕಿಯನ್ನು ಕೋಚಲಾಪುರ ಗ್ರಾಮಕ್ಕೆ ಬೀಳ್ಕೊಡ ಲಾಯಿತು. ಈ ಮೆರವಣಿಗೆಯಲ್ಲಿ ನರೇಗಲ್, ಕೋಚಲಾಪುರ, ತೋಟಗಂಟಿ, ಬೂದಿಹಾಳ, ಜಕ್ಕಲಿ, ಮಾರನಬಸರಿ, ಹಾಲಕೆರೆ, ಮಲ್ಲಾಪುರ, ನಿಡಗುಂದಿ, ಕೋಟುಮಚಗಿ, ಅಡ್ಡನೂರ ಭಕ್ತರು ಪಾಲ್ಗೊಂಡಿದ್ದರು. ಈಗಿನ ಸಯ್ಯದ್ ಮಂಜೂರ ಹುಸೇನ ಶ್ಯಾವಲಿ ಅವರು ಅಲಂಕೃತ ವಾಹನದಲ್ಲಿ ಕುಳಿತು ಭಕ್ತರಿಗೆ ದರ್ಶನ ನೀಡಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button