ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿರುವ ಅಡವಿ ನರಿ ಕಾಪಾಡಿದ ಅಗ್ನಿ ಶಾಮಕದಳ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು.
ಪಾರ್ಥನಹಳ್ಳಿ ಏ.06

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಾರ್ಥನಹಳ್ಳಿ ಗ್ರಾಮದಲ್ಲಿ ಅಡವಿ ನರಿಯು ಆಕಸ್ಮಿಕವಾಗಿ ಕಾಲು ಜಾರಿ ಸುರೇಶ್ ತೇಲಿ ಎಂಬುವರ ಬಾವಿಯಲ್ಲಿ ಬಿದ್ದಿರುವ ಘಟನೆ ದಿನಾಂಕ 05/04/2025 ರಂದು ಸಮಯ ಮಧ್ಯಾನ್ಹ 02:00 ಕ್ಕೆ ಶನಿವಾರ ನಡೆದಿದೆ. ತಕ್ಷಣ ಊರಿನ ಗ್ರಾಮಸ್ಥರು ಅಥಣಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿದಾಕ್ಷಣ ಸ್ಥಳಕ್ಕೆ ಜಲವಾಹನ ಮತ್ತು ಸಿಬ್ಬಂದಿಯವರು ರಕ್ಷಣಾ ಸಾಮಗ್ರಿ ಗಳೊಂದಿಗೆ ಮಲ್ಲಿಕಜಾನ ಜಮದಾರ ಅಗ್ನಿಶಾಮಕ ಠಾಣಾಧಿಕಾರಿ ನೇತೃತ್ವದಲ್ಲಿ ಹಾಗೂ ಸಿಬ್ಬಂದಿ ಯವರು ಮತ್ತು ಅರಣ್ಯ ಅಧಿಕಾರಿ ಸಿಬ್ಬಂದಿಯವರು ಒಡಗೂಡಿ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ತೆರೆದ ನೀರಿರುವ ಬಾವಿಯಲ್ಲಿ ಅಂದಾಜು 45 ರಿಂದ 50 ಅಡಿ ಆಳದಲ್ಲಿ ಅಡವಿ ನರಿ ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವುದನ್ನು ಸುಮಾರು 01 ಗಂಟೆ 00 ನಿಮಿಷಗಳ ಕಾಲ ಕಷ್ಟಕರ ಜಂಟಿ ಕಾರ್ಯಚರಣೆಯನ್ನು ಮಾಡಿ ಅಡವಿ ನರಿಯನ್ನು ಜೀವಂತವಾಗಿ ರಕ್ಷಣೆ ಮಾಡಲಾಯಿತು.

ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಯ ವಿವರಗಳು. 01) ಮಲ್ಲಿಕಜಾನ ಜಾಮದಾರ 02) ಆಶಿಫ್ ಅಹಮದ್ ಸನದಿ 03) ಸುಭಾನ್ ಪಿರಜಾದೆ 04) ಕರೆಪ್ಪ.ರಬಕವಿ. 05) ಮಹಾದೇವ್.ಚೌಗಲಾ 06) ಸಂತೋಷ್ ಚೌಗುಲಾ ಅರಣ್ಯ ಇಲಾಖೆಯ ಸಿಬ್ಬಂದಿಯವರು ಊರಿನ ಗ್ರಾಮಸ್ಥರು ಕಾರ್ಯಾಚರಣೆ ಕೈಗೊಂಡಿದ್ದರು ಎಂದು ವರದಿಯಾಗಿದೆ.