ನಿಧನ ವಾರ್ತೆ: ಅಮ್ಮನಕೇರಿ ಮಠದ ಬಸವರಾಜಯ್ಯ – ಅಮ್ಮನಕೇರಿ.
ಅಮ್ಮನಕೇರಿ ಮೇ.25

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಅಮ್ಮನಕೇರಿ ಗ್ರಾಮದ ಜಂಗಮ ಸಮುದಾಯದ ಯುವ ಮುಖಂಡ, ಪತ್ರಕರ್ತರು ಹಾಗೂ ಗುಡಿ ಕೈಗಾರಿಕೋದ್ಯಮಿ ಯಾಗಿದ್ದ. ಅಮ್ಮನಕೇರಿ ಮಠದ ಬಸವರಾಜಯ್ಯ (40) ಇಂದು (ಮೇ 25) ಮುಂಜಾನೆ 9 ಗಂಟೆಗೆ ತಮ್ಮ ಸ್ವಗೃಹದಲ್ಲಿ ಅನಾರೋಗ್ಯ ದಿಂದ ನಿಧನರಾಗಿದ್ದಾರೆ. ಅವರು ವರ್ಷದಿಂದ ಗ್ಯಾಂಗ್ರೀನ್ ನಿಂದ ಬಳಲುತಿದ್ದು , ಹಲವೆಡೆ ಖಾಸಗೀ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಸಣ್ಣ ಹೋಟೆಲ್, ಎಲ್ಕೆಟ್ರಿಕಲ್, ಶಾಮಿಯಾನ ಸಪ್ಲೇಯರ್ಸ್ ಸೇರಿದಂತೆ ವಿವಿಧ ಗುಡಿ ಕೈಗಾರಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದರು. ಪ್ರವೃತ್ತಿಗಾಗಿ ಪತ್ರಿಕಾ ರಂಗವನ್ನು ಆಯ್ಕೆ ಮಾಡಿಕೊಂಡು, ಧರಣಿ ಘರ್ಜನೆ ಯೂಟ್ಯೂಬ್ ಚಾನೆಲ್ ಸೇರಿದಂತೆ. ವಿವಿಧ ಸ್ಥಳೀಯ ವಾರ ಪಾಕ್ಷಿಕ ಪತ್ರಿಕೆಗಳಲ್ಲಿ ಅನೇಕ ವರ್ಷಗಳಿಂದ, ಕೂಡ್ಲಿಗಿ ತಾಲೂಕಿನ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಕರ್ನಾಟಕ ಪತ್ರಕರ್ತರ ಸಂಘದ ಕೂಡ್ಲಿಗಿ ಘಟಕದ ಪದಾಧಿಕಾರಿಯಾಗಿ ಸೇವೆಯಲ್ಲಿದ್ದರು.

ಮೃತರು ತಾಯಿ ತಂದೆ. ಮಡದಿ ಹಾಗೂ ಇಬ್ಬರು ಪತ್ರರನ್ನು ತುಂಬು ಕುಟುಂಬವನ್ನು ಬಂಧು ಬಳಗ ಶಿಷ್ಯ ವರ್ಗವನ್ನು ಹೊಂದಿದವ ರಾಗಿದ್ದರು. ಅಂತ್ಯಕ್ರಿಯೆ:- ಮೇ 26 ರಂದು ಬೆಳಿಗ್ಗೆ 9 : 30 ಗಂಟೆಗೆ ಅಮ್ಮನಕೇರಿ ಗ್ರಾಮದ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸ ಲಾಗುವುದು. ಸಂತಾಪ ಎ.ಎಮ್ ಬಸವರಾಜಯ್ಯ ರವರ ಅಗಲಿಕೆಯಿಂದಾಗಿ ಅವರ ಕುಟುಂಬದಲ್ಲಿ ದುಖಃ ಮಡುವುಗಟ್ಟಿದೆ ಸೂತಕದ ಛಾಯೆ ಆವರಿಸಿದೆ. ಅಮ್ಮನಕೇರಿ ಮಠದ ಸಮಸ್ತ ಬಂಧುಗಳು ದುಖಃ ತಪ್ತರಾಗಿದ್ದಾರೆ. ಬಸವರಾಜಯ್ಯ ರವರ ಅಕಾಲಿಕ ಅಗಲಿಕೆಗೆ ಗ್ರಾಮದ ಜಂಗಮ ಸಮುದಾಯ ಹಾಗೂ ವೀರಶೈವ ಸಮುದಾಯದವರು ಸೇರಿದಂತೆ ವಿವಿಧ ಸಮುದಾಯದವರು ಅಮ್ಮನಕೇರಿ ಗ್ರಾಮದ ಸಮಸ್ತ ಗ್ರಾಮಸ್ಥರು ಕ್ಷೇತ್ರದ ಶಾಸಕರಾದ ಡಾ, ಎನ್.ಟಿ ಶ್ರೀನಿವಾಸ್ ರವರು ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಸರ್ವ ಸದಸ್ಯರು. ಅಮ್ಮನಕೇರಿ ಗ್ರಾಮದ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು. ವಿವಿಧ ಜನ ಪ್ರತಿನಿಧಿಗಳು. ಕೂಡ್ಲಿಗಿ ತಾಲೂಕಿನ ಸಮಸ್ತ ಪತ್ರಕರ್ತರು. ಗ್ರಾಮದ ಎಲ್ಲಾ ಸಂಘಟನೆಗಳ ಸರ್ವ ಸದಸ್ಯರು. ಜಂಗಮ ಸಮಾಜದ ಎಲ್ಲಾ ಸಂಘಟನೆಗಳು. ಕಾರ್ಮಿಕರ. ಮಹಿಳಯರ. ರೈತರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ವಿವಿಧ ಪಕ್ಷಗಳ ಪ್ರಮುಖರು ಸಮಾಜ ಸೇವಕರು. ಹೋರಾಟಗಾರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ