ಸಂಸ್ಕೃತಿ ಮತ್ತು ಮಾನವೀಯ ನೈತಿಕತೆ ಹೆಚ್ಚಿಸುವುದಲ್ಲದೆ ಶಿಸ್ತು ಬದ್ಧ ಜೀವನ ಸಾಗಿಸಲು ಸಾಧ್ಯ – ಡಾ, ಕೆ.ಎಮ್ ವೀರೇಶ್.
ಚಿತ್ರದುರ್ಗ ಮೇ.26

ಚೇತನ ಫೌಂಡೇಶನ್ ಧಾರವಾಡ ಆಯೋಜಿಸಿದ್ದ ಚಿತ್ರದುರ್ಗದ ರೋಟರಿ ಬಾಲ ಭವನದಲ್ಲಿ ಚಿತ್ರದುರ್ಗ ನುಡಿ ಸಡಗರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಚೇತನ ಫೌಂಡೇಶನ್ ಮುಖ್ಯಸ್ಥರಾದ ಚಂದ್ರಶೇಖರ್ ಮಾಡಗೇರಿ ಇವರ ಸಾರಥ್ಯದಲ್ಲಿ 244 ನೇ. ಕಾರ್ಯಕ್ರಮ ಇದಾಗಿತ್ತು ಸಾಹಿತ್ಯ ಉಳಿಸಿ ಬೆಳೆಸಲು ಇಂದಿನ ಯುವ ಜನತೆಗೆ ಚಿತ್ರದುರ್ಗ ನುಡಿ ಸಡಗರಂತಹ ಕಾರ್ಯಕ್ರಮಗಳು ಪ್ರೇರಣೆಯಾಗಿದೆ ಎಂದರು.ಬಾಪೂಜಿ ವಿಧ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಚಿತ್ರದುರ್ಗ ನುಡಿ ಸಡಗದ ಸರ್ವಾಧ್ಯಕ್ಷರಾದ ಡಾ, ಕೆ.ಎಂ ವೀರೇಶ್ ಚಾಲನೆ ನೀಡಿ ಮಾತನಾಡಿ ಸಂಸ್ಕೃತಿ ಮತ್ತು ಮಾನವೀಯ ನೈತಿಕತೆ ಹೆಚ್ಚಿಸುವುದಲ್ಲದೆ ಶಿಸ್ತು ಬದ್ಧ ಜೀವನ ಸಾಗಿಸಲು ಸಾಧ್ಯ ಸಂಗೀತ ನೃತ್ಯ ಕಲೆಯಿಂದ ಹೃದಯ ಸಂಪನ್ನತೆ ಇಂದಿನ ಯುವಕರು ಕನ್ನಡದ ಪುಸ್ತಕಗಳನ್ನು ಓದುವ ಹವ್ಯಾಸ ರೂಡಿಸಿ ಕೊಳ್ಳಬೇಕು. ಮತ್ತು ಶರಣ ಶರಣಿಯರ ತತ್ವ ಆದರ್ಶಗಳನ್ನು ಮೈಗೂಡಿಸಿ ಕೊಳ್ಳಬೇಕು. ಜೊತೆಗೆ ವಚನ ಸಾಹಿತ್ಯ ಅಧ್ಯಯನ ಮಾಡುವುದರಿಂದ ಜ್ಞಾನಾರ್ಜನೆ ಉಂಟಾಗುತ್ತದೆ ಎಂದರು.ಬಳಿಕ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲಾ ಸಾಹಿತ್ಯ & ಅನನ್ಯತೆ, ಜಿಲ್ಲಾ ಸಂಘಟನೆ & ಧಾರ್ಮಿಕ ಪರಂಪರೆ ಹಾಗೂ ಜಿಲ್ಲೆಯ ಗತ ವೈಭವದ ನೆನಪುಗಳ ವಿಷಯದ ಮೇಲೆ ವಿಷಯ ಮಂಡಿಸಲಾಯಿತು.

ಬಳಿಕ ವಿಶೇಷವಾಗಿ ಹಲವರಿಂದ ಕಾರ್ಯಕ್ರಮದಲ್ಲಿ ಕಾವ್ಯ ವಾಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾವ್ಯ ವಾಚಿಸಿದರು. ನಂತರ ಕನ್ನಡ ನಾಡಿನ ಸಾಧಕರಿಗೆ ವೀರ ಮದಕರಿ ಸೇವಾಪ್ರಶಸ್ತಿ, ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ, ಒನಕೆ ಓಬವ್ವ ಸೇವಾರತ್ನ ಪ್ರಶಸ್ತಿ ಹಾಗೂ ಕಾವ್ಯ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಕಾರ್ಯಕ್ರಮದಲ್ಲಿ ಚಂದ್ರಶೇಖರ ಮಾಡಲಗೇರಿ, ಡಾ ನವೀನ್ ಸಜ್ಜನ್, ಲೇಖಕರಾದ ಪರಮೇಶ್ವರಪ್ಪ ಕುದರಿ, ಸುರೇಶ್ ಕೋರಕೊಪ್ಪ, ಪತ್ರಕರ್ತರಾದ ಸಿ.ರಾಜಶೇಖರ್, ವೀರೇಶ್, ಕೆ ಎಸ್, ಡಾ, ನವೀನ್ ಮಸ್ಕಲ್, ಡಾ, ಶಪಿವುಲ್ಲಾ, ಡಾ, ಪ್ರಸನ್ನ ನಾಡಿಗರ್ , ಸೌಮ್ಯ ಮಂಜುಳ ಕೆ, ಕೆಎಸ್ ಮಾಲ , ರಾಜೇಂದ್ರ ಕುಮಾರ್ ಮಠ, ಬಾವುಟ ಬಸವರಾಜ, ಡಾ, ಟಿ ಓಂಕಾರಪ್ಪ, ತಿಪ್ಪೇಸ್ವಾಮಿ, ಕೆ.ಎಂ ಸಿದ್ದೇಶ್, ಶೈಲಜಾ ಬಾಬು, ಶಶಿಕಲಾ, ಮಂಜುಳಾ, ಕೆಎಂ ಸುಪ್ರಿಯ, ವಿನಾಯಕ ಆರ್ ಜಿ , ಮಹೇಶ್, ಡಾ, ಎ ಕರಿಬಸಪ್ಪ, ಹೆಚ್. ಸತೀಶ್ ಕುಮಾರ್, ಕೋಗಲೂರು ತಿಪ್ಪೇಸ್ವಾಮಿ, ಸೇರಿ ಹಲವು ಗಣ್ಯರು ಹಾಜರಿದ್ದರು.
ಹೋಬಳಿ ವರದಿಗಾರರು, ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ