ಚರಂಡಿ ನೀರಿನ ಸಮಸ್ಯೆ ಬಗೆಹರಿಸಿ, ಇಲ್ಲವಾದರೆ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ – ದತ್ತಾತ್ರೆಯ.ಮ ಮಠಪತಿ ಆಗ್ರಹ.

ಗೋಳಸಾರ ಮೇ.31

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಪಂಚಾಯತ ವ್ಯಾಪ್ತಿಗೆ ಸಂಬಂಧಿಸಿದ ಗೋಳಸಾರ ಗ್ರಾಮದ ಸಮಸ್ಯೆವಿದು. ಗ್ರಾಮದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಅದರಲ್ಲಿ ಹೆಚ್ಚಾಗಿ ಒಂದನೇ ವಾರ್ಡ್ ಗೆ ಹೋದರೆ ಸಾಕು ರಸ್ತೆಯಲ್ಲಿ ಕಾಲಿಡಲು ಸಾಧ್ಯವಾಗದ ಚರಂಡಿ ನೀರಿನ ಅಬ್ಬರ. ರಸ್ತೆಯ ಎಡ ಬಲಗಳಲ್ಲಿ ಗಬ್ಬೆದ್ದು ನಾರುವ ಚರಂಡಿ ನೀರಿನ ದುರ್ವಾಸನೆ, ಇದನ್ನು ಸರಿಪಡಿಸಿರಿ ಎಂದು ಅನೇಕ ಬಾರಿ ಸಂಬಂಧಿಸಿದ ಸದಸ್ಯರಿಗೆ, ಪಂಚಾಯಿತಿ ಅಧಿಕಾರಿಗಳಿಗೆ ಲಿಖಿತ ಮನವಿ ಕೊಟ್ಟರು.

ಇತ್ತ ಕಡೆ ಯಾರು ಕೂಡಾ ‘ಕ್ಯಾ ರೇ’ ಎನ್ನುತ್ತಿಲ್ಲಾ ಆದರೆ ಇದೇ ರೀತಿ ಪಂಚಾಯತಿ ಅಧಿಕಾರಿಗಳು ಈ ಗೋಳಸಾರ ಗ್ರಾಮದ ಕುರಿತು ನಿರ್ಲಕ್ಷ್ಯಿಸಿದರೆ, ಚರಂಡಿ ನೀರಿನ ಸಮಸ್ಯೆ ಯೊಂದಿಗೆ ಬೀದಿ ದೀಪಗಳ ವ್ಯವಸ್ಥೆ ಮಾಡಬೇಕು. ಇಷ್ಟೇ ಅಲ್ಲದೇ ಗ್ರಾಮದಲ್ಲಿ ಇನ್ನೂ ಅನೇಕ ಸಮಸ್ಯೆಗಳಿವೆ. ಮೊದಲು ಸಾರ್ವಜನಿಕರಿಗೆ ಆರೋಗ್ಯ ದೃಷ್ಟಿಯಿಂದ ರೋಗ ರುಜಿನ ಬಾರದಂತೆ ಚರಂಡಿ ನೀರಿನ ಸಮಸ್ಯೆ ಬಗೆಹರಿಸಿ.

ಒಂದು ವೇಳೆ ವಿಳಂಬ ನೀತಿ ಅನುಸರಿಸಿದರೆ ಗ್ರಾಮ ಪಂಚಾಯತಿ ತಾಲುಕಾ ಪಂಚಾಯಿತಿಗೆ ಬೀಗ ಹಾಕಿ ಸಮಸ್ಯೆ ಬಗೆಹರಿಯುವ ವರೆಗೆ ಪಂಚಾಯತ ಎದುರು ಗ್ರಾಮಸ್ಥರೆಲ್ಲಾ ಸೇರಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಪತ್ರಿಕಾ ಪ್ರಕಟನೆಯ ಮುಖಾಂತರ ಸಂಬಂಧಿಸಿದ ಅಧಿಕಾರಿಗಳಿಗೆ ಎಚ್ಚರಿಸಲಾಗಿದೆ ಎಂದು ಗ್ರಾಮದ ಯುವ ಮುಖಂಡರಾದ ದತ್ತಾತ್ರೇಯ.ಮ ಮಠಪತಿ ಇವರು ತಿಳಿಸಿದ್ದಾರೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button