ಕಾಲೇಜು ಪ್ರಾರಂಭೋತ್ಸವ – ವಿದ್ಯಾರ್ಥಿಗಳಿಗೆ ಸ್ವಾಗತ.
ಮುಗಳಖೋಡ ಜೂ.02

ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಸಿದ್ದರಾಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ತಿಲಕ ಹಚ್ಚಿ ಆರತಿ ಮಾಡಿ ಬರಮಾಡಿ ಕೊಳ್ಳಲಾಯಿತು. ಪ್ರಾರಂಭೋತ್ಸವ ದಿನ ತರಗತಿ ಮುಂದೆ ರಂಗೋಲಿ ಹಾಕಿ ಬಾಗಿಲುಗಳಿಗೆ ತೋರಣಗಳಿಂದ ಶೃಂಗರಿಸಿದ್ದರು. ಈ ಸಮಯದಲ್ಲಿ ಸಿಬ್ಬಂದಿಗಳಾದ ಪಿ.ಯು ಕಾಲೇಜಿನ ಪ್ರಾಚಾರ್ಯರಾದ ಎಸ್.ಜಿ ಹಂಚಿನಾಳ. ವ್ಹಿ.ಎಂ ಕರಡಿ. ಬಿ.ಬಿ ಬಂಡಿಗನಿ. ವಾಯ್.ಕೆ ಕಾಕಂಡಕಿ ಪೀ.ಆರ್ ತೆಳಗಡೆ. ಬಿ.ವಿ ಹಟ್ಟಿಮಣಿ. ಅಮರ ಮ್ಯಾಗೇರಿ. ಎಸ್.ಎಮ್. ಢವಳೇಶ್ವರ. ಎ.ಎಸ್ ಸಾರವಾಡೆ. ಎಸ್.ಎನ್ ಮಗದುಮ್ಮ. ಇನ್ನೂ ಮುಂತಾದ ಸಿಬ್ಬಂದಿಗಳು ಪಾಲಕರು ವಿದ್ಯಾರ್ಥಿಗಳು ಉಪಸ್ತಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪರಶುರಾಮ ತೆಳಗಡೆ.ರಾಯಬಾಗ