ಲೋಕ ಕಲ್ಯಾಣಕ್ಕಾಗಿ ವಿವಿಧ ಹೋಮಗಳ ಆಯೋಜನೆ ಮಾದರಿ ಕಾರ್ಯ – ಪೂಜ್ಯ ವೈ.ರಾಜಾರಾಮ್ ಗುರುಗಳು ಸಂತಸ.

ಚಳ್ಳಕೆರೆ ಜೂ.02

ಲೋಕ ಕಲ್ಯಾಣಾರ್ಥವಾಗಿ ವಿವಿಧ ಹೋಮಗಳನ್ನು ಆಯೋಜಿಸಿರುವುದು ಮಾದರಿ ಸೇವೆಯಾಗಿದೆ ಎಂದು ಚಳ್ಳಕೆರೆಯ ನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ವೈ.ರಾಜಾರಾಮ್ ಗುರುಗಳು ಸಂತಸ ವ್ಯಕ್ತಪಡಿಸಿದರು.

ನಗರದ ಪಾವಗಡ ರಸ್ತೆಯ ಶ್ರೀಸಾಯಿ ಬಾಬಾ ಮಂದಿರದಲ್ಲಿ ಶ್ರೀವೆಂಕಟಸಾಯಿ ಸೇವಾ ಟ್ರಸ್ಟ್ ನ ವತಿಯಿಂದ ಲೋಕ ಕಲ್ಯಾಣಕ್ಕಾಗಿ ‌ಹಮ್ಮಿಕೊಳ್ಳಲಾಗಿದ್ದ ವಿವಿಧ ಹೋಮಗಳ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಶ್ರೀವೆಂಕಟಸಾಯಿ ಸೇವಾ ಟ್ರಸ್ಟ್ ನ ವತಿಯಿಂದ ಕಾಲುವೆಹಳ್ಳಿಯ ಶತಾಯುಷಿ ಸೂಲಗಿತ್ತಿ ತಳುಕಿನ ತಿಮ್ಮಕ್ಕ ಮತ್ತು ಗೋಪಾಲಕಿ ಪಾರ್ವತಮ್ಮ ಅವರನ್ನು ಸನ್ಮಾನಿಸಿ ಗೌರವ ಧನ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬಿ.ಸಿ ಸಂಜೀವಮೂರ್ತಿ, ವೆಂಕಟೇಶಮೂರ್ತಿ, ಸತೀಶ್ ಕುಮಾರ್, ಬಿ.ವಿ ಚಿದಾನಂದಮೂರ್ತಿ, ಕವಿತಾ ನಾಗೇಶ್, ರಾಮಚಂದ್ರಪ್ಪ, ರೇವಣಸಿದ್ದಪ್ಪ, ಯತೀಶ್.ಎಂ ಸಿದ್ದಾಪುರ, ಪಾಲಕ್ಕ, ಮಂಜುಳ ಜಯಪಾಲ, ಗೌತಮಿ, ಮೌನಶ್ರೀ, ಅಪರ್ಣ, ಸುನೀತ ಗೋಪಾಲಕೃಷ್ಣ, ಅಂಬಿಕಾ ಪರಮೇಶ್ವರ್, ಮಾಕಂಸ್ ಲಕ್ಷ್ಮೀ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button