ನರೇಗಾ ಕೆಲಸಕ್ಕೆ ಹೋದ – ವ್ಯಕ್ತಿ ಸಾವು.
ತೂಲಹಳ್ಳಿ ಜೂ.02

ಕೊಟ್ಟೂರು ತಾಲೂಕಿನ ತೂಲಹಳ್ಳಿ ಗ್ರಾಮ ಪಂಚಾಯಿತಿಯ ಸಿ.ಹುಲುಗಪ್ಪ ತಂದೆ ನಾಗಪ್ಪ (60) ಎಂಬುವರು ಉಜ್ಜಿನಿ ಕೆರೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕೆಲಸ ಮಾಡುವಾಗ ಸುಮಾರು 9:30 ಗಂಟೆಗೆ ಎಚ್ಚರದತಪ್ಪಿ ಕುಸಿದು ಬಿದ್ದು ನಂತರ ಉಜ್ಜಿನಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೈಕಿನಲ್ಲಿ ಬಿ.ಎಫ್.ಟಿ ದಾನಪ್ಪ ಮತ್ತು ಮೇಟಿ ಕೊಟ್ರೇಶ್ ಕರೆದು ಕೊಂಡು ಬಂದರು ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು ಎಂದು ತಿಳಿಯಿತು ಎಂದು ಪ್ರಶಾಂತ್ ಕುಮಾರ್ ಪಿ.ಡಿ.ಓ ತಿಳಿಸಿದರು.

ನಂತರ ಉಜ್ಜಿನಿ ಆಸ್ಪತ್ರೆಗೆ ಸಲೀಂ ಭಾಷಾ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಎಸ್.ಮಹೇಶ್ ಇನ್ನಿತರ ಸದಸ್ಯರುಗಳು,ನರೇಗಾ ಸಹಾಯಕ ನಿರ್ದೇಶಕರಾದ ವಿಜಯ್ ಕುಮಾರ್, ಪಂಚಾಯತಿಯ ಕಾರ್ಯದರ್ಶಿಯಾದ ಮರಿಯಪ್ಪ, ನಾಗರಾಜ್ ಡೇಟಾ ಆಪರೇಟರ್, ಪ್ರಕಾಶ್ ಬಿಲ್ ಕಲೆಕ್ಟರ್, ಇಂಜಿನಿಯರ್ ಚಂದ್ರಶೇಖರ್, ಮತ್ತು ಮೇಟಿಗಳು ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು