ಆಹಾರ ಭದ್ರತೆಗಾಗಿ ತಾಲೂಕಿನಾದ್ಯಂತ – ವಿಕಸಿತ ಕೃಷಿ ಸಂಕಲ್ಪ ಅಭಿಯಾನ.
ಇಂಡಿ ಜೂ.04

ಆಧುನಿಕ ಕೃಷಿ ಪದ್ದತಿಗಳ ಮೂಲಕ ಸಮೃದ್ದ ರೈತರನ್ನು ಒಳಗೊಂಡ ಅಡಿಪಾಯವನ್ನು ನಿರ್ಮಿಸುವ ಸಂಕಲ್ಪದೊಂದಿಗೆ ಕೇಂದ್ರ ಸರಕಾರ ತಾಲೂಕಿನಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಹಮ್ಮಿಕೊಂಡಿದೆ ಎಂದು ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ಹೇಳಿದರು.ತಾಲೂಕಿನ ಹಿಂಗಣಿ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದ ಆವರಣದಲ್ಲಿ ಕೃಷಿ ವಿಜ್ಞಾನ ಕೇಂದ್ರ ಇಂಡಿ ಮತ್ತು ಕೃಷಿ ಇಲಾಖೆಯಿಂದ ನಡೆದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರ್ಥಿಕತೆಯ ಬೆನ್ನೆಲುಬಾಗಿ ಉಳಿದಿರುವ ಕೃಷಿಯು ತಾಲೂಕಿನ ಜನ ಸಂಖ್ಯೆಯ ಅರ್ಧದಷ್ಟು ಜನರಿಗೆ ಜೀವನೋಪಾಯವನ್ನು ಒದಗಿಸುವುದಲ್ಲದೆ ಆಹಾರ ಭದ್ರತೆಗೂ ತಳಹದಿ ಯಾಗಿದೆ. ಭಾರತವನ್ನು ವಿಶ್ವ ಆಹಾರ ಬುಟ್ಟಿ ಯನ್ನಾಗಿಸುವ ದೃಷ್ಟಿ ಕೋನದೊಂದಿಗೆ ಕೈ ಗೊಂಡಿರುವ ಈ ಅಭಿಯಾನವು ಸುಸ್ಥಿರ ಕೃಷಿ ಮತ್ತು ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಅಂತರ ರಾಷ್ಟ್ರೀಯ ಆಹಾರ ಸಹಕಾರವನ್ನು ಬಲ ಪಡಿಸಲು ಪ್ರಯತ್ನಿಸುತ್ತದೆ ಎಂದು ಕೇಂದ್ರ ಸರಕಾರ ಹೇಳಿದೆ ಎಂದರು.ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ಮಾತನಾಡಿ ತಾಲೂಕಿನ ಐದು ಲಕ್ಷ ಜನರಿಗೆ ಆಹಾರ ಭದ್ರತೆಯನ್ನು ಖಚಿತ ಪಡಿಸುವುದು ಕೃಷಿ ಇಲಾಖೆ ಉದ್ದೇಶವಾಗಿದೆ. ಜೊತೆಗೆ ಪೌಷ್ಟಿಕ ಆಹಾರದ ಲಭ್ಯತೆಯನ್ನು ಖಾತರಿ ಪಡಿಸುವುದು ರೈತರ ಆದಾಯವನ್ನು ಸುಧಾರಿಸುವ ಮತ್ತು ಭವಿಷ್ಯದ ಪೀಳಿಗೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವದು ಈ ಅಭಿಯಾನದಲ್ಲಿ ಸೇರಿದೆ. ಈ ಅಂದೋಲನ ಖಾರಿಫ್ ಮತ್ತು ರಾಬಿ ಬೆಳೆಗಳಿಗೆ ಬಿತ್ತನೆ ಆರಂಭಕ್ಕೆ ಮುಂಚೆ ಪ್ರತಿ ವರ್ಷ ನಡೆಸಲು ಉದ್ದೇಶಿಸಲಾಗಿದೆ ಎಂದರು. ಭಾರತೀಯ ತೋಟಗಾರಿಕೆ ಸಂಸ್ಥೆ ಬೆಂಗಳೂರಿನ ಮಂಜುನಾಥ ಎಲ್ ಮಾತನಾಡಿ ಈ ಅಭಿಯಾನ ಗುರಿಗಳು ಉತ್ಪಾದನೆಯನ್ನು ಹೆಚ್ಚಿಸುವುದು ಉತ್ಪಾದನೆ ವೆಚ್ಚವನ್ನು ಕಡಿಮೆ ಮಾಡುವುದು ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಖಚಿತ ಪಡಿಸುವುದು ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ನಷ್ಟವನ್ನು ಸರಿ ದೂಗಿಸುವದು ಮೌಲ್ಯ ವರ್ಧನೆ ಮತ್ತು ಆಹಾರ ಸಂಸ್ಕರಣೆ ಯೊಂದಿಗೆ ಬೆಳೆ ವೈವಿಧ್ಯ ಕರಣವನ್ನು ಉತ್ತೇಜಿಸುವುದು ಮತ್ತು ನೈಸರ್ಗಿಕ ಮತ್ತು ಸಾವಯುವ ಕೃಷಿಯನ್ನು ಪ್ರೋತ್ಸಾಹಿಸುವದು ಇದೆ ಎಂದರು. ಡಾ, ಪ್ರಸಾದ. ಡಾ, ಪ್ರಕಾಶ. ಡಾ, ವೀಣಾ. ಡಾ, ಬಾಲಾಜಿ ಕೃಷಿ ಸಂಕಲ್ಪ ಅಭಿಯಾನ ಕುರಿತು ರೈತರಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ರಾಜಶೇಖರ, ನಜೀರಸಾಬ, ಅಂಬಣ್ಣ ಕೇಲಿ, ಜಗದೀಶ ಮಹಾದೇವ ಪೂಜಾರ, ಲೀಲಾವತಿ ಗಾಯಕವಾಡ, ಜ್ಯೋತಿ ಬೇನೂರ, ಶ್ರೀದೇವಿ ಕಟ್ಟಿಮನಿ ಮತ್ತಿತರಿದ್ದರು.