ಜಕ್ಕಲಿ ಎಸ್.ಎ.ಜೆ.ಡಿ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ – ಗುರು ವಂದನೆ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮ.

ಗದಗ ಜೂ.05

ಜಕ್ಕಲಿಯ SAJD ಹೈಸ್ಕೂಲ್ ನ 1998-99 ನೇ. ಸಾಲಿನ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳಿಂದ ಗುರು ವಂದನಾ ಹಾಗೂ ಸ್ನೇಹ ಸಮ್ಮೀಲನ ಸಮಾರಂಭವನ್ನು ಜೂನ್ 14 ರ ಶನಿವಾರ ದಂದು ಬೆಳಗ್ಗೆ 10 ಗಂಟೆಗೆ ಜಕ್ಕಲಿಯ ಎಸ್.ಎ.ಜೆ.ಡಿ ಸರಕಾರಿ ಪ್ರೌಢ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಯರಾದ ಬಿ.ಆರ್ ಗದಗಿನ ವಹಿಸಿ ಕೊಳ್ಳುವರು. ಕಾರ್ಯಕ್ರಮವನ್ನು ಶಿಕ್ಷಣ ಪ್ರೇಮಿಗಳಾದ ರವೀಂದ್ರ ದೊಡ್ಡಮೇಟಿ ಉಧ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ನರೇಗಲ್ ಪೋಲಿಸ್ ಠಾಣೆಯ ಪಿ.ಎಸ್.ಐ ಶ್ರೀಮತಿ ಐಶ್ವರ್ಯ ವಿಶ್ವನಾಥ ನಾಗರಾಳ ಆಗಮಿಸುವರು.ಈ ಕಾರ್ಯಕ್ರಮದಲ್ಲಿ ವಿಷೇಶ ಸನ್ಮಾನಿತರಾಗಿ ನಿವೃತ್ತ ಪ್ರೌಢ ಶಾಲೆ ಶಿಕ್ಷಕರು ಹಾಗೂ ಆಕಾಶವಾಣಿ ಕಲಾವಿದರಾದ ಸಿ.ಎಂ ವಡಗೇರಿ, ನಿವೃತ್ತ ಶಿಕ್ಷಕ ಟಿ.ಟಿ ದಾಸರ, ಡಿ.ಬಿ ತಳವಾರ, ವೀರಣ್ಣ ಮೆಣಸಿನಕಾಯಿ, ಸಿ.ವಿ ಗುತ್ತೆಪ್ಪನವರ್, ಎ.ಟಿ ಗುಳಗಣ್ಣವರ್, ಎಮ್.ವಾಯ್ ಹಳೇಮನಿ, ಎಸ್.ಆರ್ ಬಾಗಲಿ, ಎಸ್.ಬಿ ಬಳಗೇರ, ಎಸ್.ಟಿ ಕಳಸಾಪೂರ, ವಾಯ್.ಕೆ ಗುಡದೂರ, ದ್ವೀತಿಯ ದರ್ಜೆ ಸಹಾಯಕರಾದ ಎನ್.ಬಿ ಹಿರೇಮನಿ, ಡಿ ದರ್ಜೆ ನೌಕರರಾದ ಅಯ್ಯಪ್ಪ ತಿಲಗರ, ನಿವೃತ್ತ ಡಿ ದರ್ಜೆ ನೌಕರರಾದ ಎಚ್.ವಾಯ್ ಮಣ್ಣೋಡ್ಡರ ಈ ಎಲ್ಲಾ ಮಹನೀಯರು ಸನ್ಮಾನ ಗೊಳ್ಳಲಿದ್ದಾರೆ.ಕಾರ್ಯಕ್ರಮದ ನಿರೂಪಣೆಯನ್ನು ಪ್ರೌಢ ಶಾಲೆ ಶಿಕ್ಷಕರಾದ ಈಶ್ವರ ಕುರಿ ನಡೆಸಿ ಕೊಡುವರು ಎಂದು 98-99 ನೇ. ಸಾಲಿನ ವಿದ್ಯಾರ್ಥಿ ಬಳಗದವರು ಪ್ರಸ್ಥುರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿ, ಸರ್ವರಿಗೂ ಈ ಮೂಲಕ ಸ್ವಾಗತವನ್ನು ಕೋರಿದ್ದಾರೆ ಎಂದು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಮೂಲಕ ಸರ್ವರಲ್ಲೂ ಕೋರಿಕೆ ಯಾಗಿದೆ.

ವರದಿ:ಅಂದಪ್ಪ.ಮಾದರ ಗದಗ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button