ನಾಗರಕಟ್ಟೆ ಎಂಎಸ್ಐಎಲ್ ಬಾರ್ ಕಳ್ಳತನ.
ನಾಗರಕಟ್ಟೆ ಅಕ್ಟೋಬರ್.14

ಕೊಟ್ಟೂರು ತಾಲೂಕಿನ ನಾಗರಕಟ್ಟೆ ಗ್ರಾಮದ ಬಳಿ ಇರುವ ಎಂಎಸ್ಐಎಲ್ ಮದ್ಯ ಮಾರುಕಟ್ಟೆ ಮಳಿಗೆ ಎಲ್ಲಿ ರಾತ್ರಿ ವೇಳೆ ಕಳ್ಳತನ ಈ ಮಳಿಗೆ ಹನುಮಂತಪ್ಪ ವೆಂಡರ್ ಹೇಳುವಂತೆ ಸುಮಾರು 90 ಸಾವಿರ ರೂಪಾಯಿ ಮತ್ತು ಸಿಸಿ ಕ್ಯಾಮೆರಾ ಮತ್ತು ಇದಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಹಾಗೂ ಎಂಎಸ್ಐಎಲ್ ಬಾರ್ ನಲ್ಲಿರುವ ಲಾಕರ್ ಹೊಡೆದು ಲಾಕರ್ ನಲ್ಲಿರುವ ಹಣವನ್ನು ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ ಎಂದು ಹನುಮಂತಪ್ಪ ವೆಂಡರ್ ತಿಳಿಸಿದರು.ಬೆಳಗಿನ ಜಾವ ವಿಷಯ ತಿಳಿದು ಪೋಲಿಸ್ ಠಾಣೆಗೆ ತಿಳಿಸಿದರು ನಂತರ ಪೊಲೀಸ್ ಶ್ವಾನದಳ ಸೇರಿದಂತೆ ಇದರ ವಿಚಾರವಾಗಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ,ಸಿಪಿಐ ವೆಂಕಟಸ್ವಾಮಿ,ಉಜ್ಜಿನಿ ಪಿಎಸ್ಐ ಮಾಲಿಕ್ ಸಾಬ್ ಕಲರಿ ಮತ್ತು ಪೊಲೀಸ್ ಸಿಬ್ಬಂದಿ ವರ್ಗ ಪರಿಶೀಲನೆ ಕಾರ್ಯಾಚರಣೆ ನಡೆಸಿದರು ಹಾಗೂ ಸೈಯದ್ ಗೌಸ್ ಅಬ್ದುಲ್ಲಾ ಅಬಕಾರಿ ಉಪ ನಿರೀಕ್ಷಕರು ಮತ್ತು ಸಿಬ್ಬಂದಿ ವರ್ಗ ಕೂಡ್ಲಿಗಿ ಇವರುಗಳು ಸ್ಥಳ ಪರಿಶೀಲನೆ ಮಾಡಿ ತನಿಖೆ ಕಾರ್ಯ ಕೈಗೊಂಡಿದ್ದಾರೆ.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು