ವಯೋ ನಿವೃತ್ತಿ ಹೊಂದಿದ ನಾಯ್ಕರಗೆ – ಸನ್ಮಾನ ದೊಂದಿಗೆ ಬೀಳ್ಕೊಡುಗೆ.
ರೋಣ ಜೂ.04

ಇಲಾಖೆಯಲ್ಲಿ ತಮ್ಮ ನಿಷ್ಠೆ ಹಾಗೂ ಪ್ರೀತಿಯಿಂದ ನಿಸ್ವಾರ್ಥ ಸೇವೆಯನ್ನು ನೀಡಿದ್ದಾರೆ. ಗುತ್ತಿಗೆದಾರರು ಹಾಗೂ ಸಿಬ್ಬಂದಿ ಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ನಿವೃತ್ತಿ ಜೀವನದಲ್ಲಿ ದೇವರು ಆರೋಗ್ಯ ಮತ್ತು ನೆಮ್ಮದಿಯನ್ನು ನೀಡಲಿ ಎಂದು ಲೋಕೋಪಯೋಗಿ ಇಲಾಖೆ ಕಿರಿಯ ಇಂಜನೀಯರ್ ಎಸ್.ಎಚ್ ಕರಡ್ಡಿ ಶುಭ ಹಾರೈಸಿದರು.ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ್ ಬಲವಂತಪ್ಪ ನಾಯ್ಕರ ಅವರ ಸೇವಾ ವಯೋ ನಿವೃತ್ತಿ ಅಭಿನಂದನಾ ಸಮಾರಂಭ ಜರುಗಿತು.ಇದೇ ಸಂದರ್ಭದಲ್ಲಿ ವಿ.ಎನ್ ಪಾಟೀಲ, ಎಮ್.ಎಸ್ ಪಾಟೀಲ, ಎಚ್.ಬಸವರಾಜ, ಪ್ರಭು ಹುನಗುಂದ, ಸಿ.ಮಲ್ಲಿಕಾರ್ಜುನ, ಮಲ್ಲಿಕಾರ್ಜುನ ಕುಸಗಲ್, ಪ್ರಕಾಶ ಮುದಗಲ್, ಎಫ್.ಎಚ್ ತಿಮ್ಮಾಪುರ, ಆನಂದ ಚಿಪ್ಪಾಡಿ, ಕಣವಿ ಸೇರಿದಂತೆ ಸಿಬ್ಬಂದಿಗಳು ಹಾಗೂ ಕುಟುಂಬಸ್ಥರು ಹಾಜರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ