ಬಿಲ್ ಪಾವತಿಸುವಂತೆ ಸಕ್ಕರೆ ಕಾರ್ಖಾನೆಗೆ – ರೈತರಿಂದ ಮುತ್ತಿಗೆ.
ನಾದ ಕೆ.ಡಿ ಮಾ.03

ಇಂಡಿ ತಾಲೂಕಿನ ನಾದ ಕೆಡಿ ಜಮಖಂಡಿ ಸುಗರ್ ಲಿಮಿಟೆಡ್ ಘಟಕ 02 ಕಾರ್ಖಾನೆಗೆ ಇಂದು ಹಲವಾರು ರೈತರು ಸೇರಿಕೊಂಡು ಬೆಳೆದ ಕಬ್ಬು ಕಟಾವು ಮಾಡಿ ಕೊಂಡು ಕಾರ್ಖಾನೆಗೆ ನುರಿಸಿ ಹಲವು ದಿನಗಳು ಕಳೆದರೂ ಕಾರ್ಖಾನೆ ಮಾಲೀಕರು ಇನ್ನೂ ವರೆಗೆ ಇನ್ನೂಳಿದ ಹಣ ರೈತರಿಗೆ ಪಾವತಿಸಿ ರುವುದಿಲ್ಲ. ಅಷ್ಟೇ ಅಲ್ಲದೆ ರೈತರು ಸಾಲ ಸೂಲ ಮಾಡಿ ಹಗಲು ರಾತ್ರಿ ಎನ್ನದೆ ಬೆಳೆದ ಬೆಳೆಗೆ ಸರಿಯಾಗಿ ಹಣ ದೊರೆಯದೆ ಕಂಗಾಲಾಗಿದ್ದು.

ರೈತರ ಈ ಗೋಳು ಕೇಳದ ಕಾರ್ಖಾನೆ ಮಾಲೀಕರು ಆದಷ್ಟು ಬೇಗನೆ ರೈತರ ಖಾತೆಗೆ ಹಣ ಜಮಾ ಮಾಡಬೇಕೆಂದು ಇಂದು ನೂರಾರು ರೈತರು ಜಮಖಂಡಿ ಸುಗರ್ ಲಿಮಿಟೆಡ್ – 02 ನಾದ ಕೆಡಿ ಯುನಿಟಿಗೆ ಮುತ್ತಿಗೆ ಹಾಕಿದರು ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ