ಅಂಗನವಾಡಿಗಳು ಉದ್ಘಾಟನೆ ಹಾಗೂ ನೂತನ ಅಂಗನವಾಡಿಯ ಭೂಮಿ ಪೂಜೆ – ಶಾಸಕ. ರಾಜುಗೌಡ.
ದೇವರ ಹಿಪ್ಪರಗಿ ಜೂ.05

ಮತ ಕ್ಷೇತ್ರದ ವಾಪ್ತಿಯಲ್ಲಿ ಬರುವ ಬೊಮ್ಮನಳ್ಳಿ ಹಾಗೂ ಬೋಳವಾಡ ಗ್ರಾಮಗಳಲ್ಲಿ ನೂತನ ಅಂಗನವಾಡಿ ಕೇಂದ್ರಗಳನ್ನು ಉದ್ಘಾಟನೆ ಮಾಡಿದರು.

ಕೇಸರಟ್ಟಿ ಗ್ರಾಮದ ಹಾಗೂ ಬಿಂಜಳಭಾವಿ ಗ್ರಾಮಗಳಲ್ಲಿ ನೂತನ ಅಂಗನವಾಡಿ ಕೇಂದ್ರಗಳು ಕಟ್ಟಡ ಭೂಮಿ ಪೂಜೆ ದೇವರ ಹಿಪ್ಪರಗಿ ಮತ ಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಲ್ಯಾಂಡ್ ಆರ್ಮಿ ಎ.ಇ.ಇ ರಾಜಶೇಖರ.ಎ ಎಲ್ ಸಹಾಯಕ ಅಭಿಯಂತರರಾದ ಪ್ರಪುಲ್ ಕ್ಯಾತನ, ಹಾಗೂ ಅಂಗನವಾಡಿ ಕಾರ್ಯಕರ್ತಯರು ಸಹಾಯಕಿಯರು, ಗ್ರಾಮಗಳ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ