ಗ್ರಾಮ ದೇವತೆ ಜಾತ್ರೆಗೆ ತೆರೆ, ಐದು ದಿನಗಳ ನಿರಂತರ ದಾಸೋಹ ಸೇವೆಗೆ – ಎಲ್ಲೆಡೆ ಮೆಚ್ಚುಗೆ.

ಮುದ್ದೇಬಿಹಾಳ ಜೂ.05

ಪಟ್ಟಣದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಜರಗುವ ಗ್ರಾಮ ದೇವತೆ ಜಾತ್ರೆಗೆ ಮಂಗಳವಾರ ಸಂಜೆ ತೆರೆ ಬಿದ್ದಿತ್ತು, ಐದು ದಿನಗಳ ವರೆಗೆ ಜರುಗಿದ ಈ ಜಾತ್ರೋತ್ಸವದಲ್ಲಿ ದ್ಯಾಮವ್ವನ ಕಟ್ಟೆಯಲ್ಲಿ ಶಾರದಾದೇವಿ ಮಧ್ಯದಲ್ಲಿ ಗ್ರಾಮ ದೇವತೆ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ನಾಡಿನ ವಿವಿಧ ಕಡೆಗಳಿಂದ ಬಂದ ಲಕ್ಷಾಂತರ ಭಕ್ತರು ತಮ್ಮ ಭಕ್ತಿ ಸಮರ್ಪಿಸಿ ಧನ್ಯತೆ ಮೆರೆದರು. ಮಂಗಲೋತ್ಸವ ದಿನದಂದು ಶಾರದಾದೇವಿ ಹಾಗೂ ಗ್ರಾಮ ದೇವತೆಯ ಮೂರ್ತಿಗಳನ್ನು ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ನಡೆಸಿ ಮೂಲ ಸ್ಥಳಕ್ಕೆ ಕಳಿಸಿ ಕೊಡಲಾಯಿತು. ಮೆಚ್ಚುಗೆಗೆ ಪಾತ್ರವಾದ ದಾಸೋಹ ಸೇವೆ ನೂರಾರು ಗಣ್ಯರು ಪ್ರಸಾದ ಸೇವೆಗೆ ಹೆಚ್ಚಿನ ದೇಣಿಗೆ ನೀಡಿದ ಕಾರಣದಿಂದ ಐದು ದಿನಗಳ ವರೆಗೆ ನಿರಂತರವಾಗಿ ಬೆಳಗ್ಗೆ 10 ರಿಂದ ರಾತ್ರಿ 10ರ ವರೆಗೆ ಪ್ರಸಾದದ ವ್ಯವಸ್ಥೆ ಮಾಡಿದ್ದು ಗಮನ ಸೆಳೆಯಿತು. ದಿನವೂ ಬೇರೆ ಬೇರೆ ಪದಾರ್ಥಗಳನ್ನು ಮಾಡುವ ಮೂಲಕ ಲಕ್ಷಾಂತರ ಭಕ್ತರು ಪ್ರಸಾದ ಸ್ವೀಕರಿಸಿದರು. ಇದಲ್ಲದೆ ಹುಡಕೋದ ಗವಿಸಿದ್ದೇಶ್ವರ ವೇದಿಕೆಯಲ್ಲಿ ಬಿಡಿಒ ಕ್ವಾಟರ್ಸ್ನಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ರಂಜಿಸಿದವು. ಇಡೀ ಊರಿನ ತುಂಬೆಲ್ಲ ಲೈಟಿನ ಅಲಂಕಾರ ಜಾತ್ರಿಯ ಕಳೆಯನ್ನು ಇಮ್ಮಡಿಸಿತು. ಜಾತ್ರಾ ಕಮಿಟಿಯವರು ಕೈಗೊಂಡ ಸಂಘಟಿತ ಹಾಗೂ ವ್ಯವಸ್ಥಿತ ಯೋಜನೆಗಳಿಂದ ಜಾತ್ರೆ ಅದ್ದೂರಿಯಾಗಿ ಜರುಗಿದ್ದು. ಹಿಂದೂ ಮುಸ್ಲಿಂ ಬಾಂಧವರ ಮಾವೈಕ್ಯತೆಗೆ ಸಾಕ್ಷಿಯಾಯಿತು. ಪೋಲಿಸ್ ಇಲಾಖೆಯವರು ಕೈಗೊಂಡ ಭದ್ರತೆ. ಟ್ರಾಫಿಕ್ ನಿಯಂತ್ರಣ ಕ್ರಮಗಳು ಮಾಜಿ ಸೈನಿಕರ ಸೇವೆಯನ್ನು ಜಾತ್ರೆಯಲ್ಲಿ ಸಮಸ್ಯೆ ಕಂಡು ಬರದಂತೆ ಆಯಿತು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button