ಗಾಂಧಿ ಗ್ರಾಮ ಪುರಸ್ಕಾರ ಪಡೆದ ಮುತ್ತಗಿಯಲ್ಲಿ ಸ್ವಚ್ಛತೆ ಮರೀಚಿಕೆ.
ಮುತ್ತಗಿ ಮಾರ್ಚ್.26

ರಸ್ತೆ ಮೇಲೆ ಹರಿಯುತ್ತಿರುವ ಚರಂಡಿ ನೀರು, ಅಲ್ಲಲ್ಲಿ ನಿಂತಿರುವ ತ್ಯಾಜ್ಯ ನೀರು, ಸ್ವಚ್ಛತೆ ಮರೀಚಿಕೆ ಬಸವನ ಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮುತ್ತಗಿ ಗ್ರಾಮದಲ್ಲಿ ಕಂಡು ಬರುವ ನೈಜ ಚಿತ್ರಣ ಇದಾಗಿದೆ. ಆದರೂ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪಡೆದಿದೆ ಇದಕ್ಕೆ ಅಪವಾದ ಎನ್ನುವಂತೆ ಗ್ರಾಮ ಪಂಚಾಯಿತಿ ಈ ಗ್ರಾಮದಲ್ಲಿ ವಾಸ್ತವಿಕವಾಗಿ ಈ ಸಾಧನೆ ಕಂಡು ಬರುವುದಿಲ್ಲ. ಕಡತದಲ್ಲಿಯೇ ಮಾತ್ರ ಅಭಿವೃದ್ಧಿ ಕಂಡು ಬರುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.ಮುತ್ತಗಿ ಗ್ರಾ.ಪಂ. ಗೆ ಈ ಬಾರಿ “ಗಾಂಧಿ ಗ್ರಾಮ ಪುರಸ್ಕಾರ’ ಲಭಿಸಿದ್ದರೂ ಸ್ವಚ್ಛತೆ ಮರೀಚಿಕೆಯಾಗಿದೆ. ಅಂಗನವಾಡಿ ಕೇಂದ್ರವು ರಸ್ತೆ ಪಕ್ಕದಲ್ಲಿ,ರಸ್ತೆ ಹಾಳಾಗಿದ್ದು.ಸೂಕ್ತ ರಸ್ತೆ ಜೊತೆ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಚರಂಡಿಯಲ್ಲಿ ಹರಿಯ ಬೇಕಿದ್ದ ನೀರು ಅಂಗನವಾಡಿ ಕೇಂದ್ರದ ಪಕ್ಕದಲ್ಲೇ ರಸ್ತೆಯ ಮೇಲೆ ಶೇಖರಣೆ ಯಾಗಿದ್ದು, ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ತೆರಳ ಬೇಕಾದರೆ ಗಲೀಜು ನೀರನ್ನು ತುಳಿದೆ ಅಂಗನವಾಡಿ ಕೇಂದ್ರಕ್ಕೆ ಪ್ರವೇಶಿಸ ಬೇಕು.ಅಷ್ಟೇ ಅಲ್ಲದೆ ದುರ್ವಾಸನೆ ನಡುವೆ ಮಕ್ಕಳು ಕಲಿಯುವಂತಾಗಿದೆ. ಮತ್ತು ಇದೆ ರಸ್ತೆ ಹಿಡಿದು ಗೊಲ್ಲರ ಓಣಿಗೆ ಹೋಗುತ್ತದೆ.ಇಲ್ಲಿನ ಅಂಗನವಾಡಿ ಸಮೀಪದಲ್ಲಿ ಮನೆಗಳಿಂದ ಹೊರಡುವ ಕೊಳಚೆ ನೀರು ಸಂಗ್ರಹವಾಗುತ್ತಿದ್ದು,

ಸೊಳ್ಳೆಗಳ ಉತ್ಪತಿಯ ತಾಣವಾಗಿ ಪರಿಣಮಿಸಿರುವ ಪರಿಣಾಮ ಪುಟ್ಟ ಮಕ್ಕಳಿಗೆ ರೋಗ- ರುಜಿನಗಳು ಹರಡುವ ಭೀತಿಯಿದೆ. ಹೀಗಾಗಿ ಸಂಬಂಧಪಟ್ಟ ಗ್ರಾ.ಪಂ. ಕೂಡಲೇ ಚರಂಡಿ ಹಾಗೂ ರಸ್ತೆ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ. ಅಂಗನವಾಡಿ ಸುತ್ತ ಇರುವ ಸುಮಾರು ಮನೆಗಳ ಕೊಳಚೆ ನೀರು ಸರಿಯಾಗಿ ಹರಿಯಲು ಚರಂಡಿಯ ವ್ಯವಸ್ಥೆ ಇಲ್ಲ. ರಸ್ತೆ ಕೂಡ ತೀರಾ ಹಾಳಾಗಿದ್ದು, ಪುಟ್ಟ ಮಕ್ಕಳು ಅಂಗನವಾಡಿಯತ್ತ ನಡೆದುಕೊಂಡು ಬರಲಾಗುತ್ತಿಲ್ಲ. ಗ್ರಾ.ಪಂ. ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದ್ದಾರೆ.ಎನ್ನುತ್ತಾರೆ ಗ್ರಾಮದ ಪ್ರಜ್ಞಾವಂತ ನಾಗರಿಕರು.ರಸ್ತೆಯ ಮೇಲೆ ಕೊಳಚೆ ನೀರು ನಿಂತ್ತು ನಿತ್ಯವೂ ಗಬ್ಬು ವಾಸನೆ ಹರಡುತ್ತಿದೆ. ಸೊಳ್ಳೆಗಳ ಉತ್ಪತಿ ತಾಣವಾಗಿ ಮಾರ್ಪಟ್ಟಿದೆ. ಅಂಗನವಾಡಿ ಹತ್ತಿರ ಗಬ್ಬೆದ್ದು ನಾರುತ್ತಿರುವ ಗಟಾರ ನೀರು ಈ ರೀತಿ ಅವ್ಯವಸ್ಥೆವಿದ್ದರೂ ಈ ಗ್ರಾಮ ಪಂಚಾಯಿತಿಗೆ ಗಾಂಧಿ ಪುರಸ್ಕಾರ ನೀಡಿರುವುದು “ನಾಚಿಕೆಗೇಡಿನ” ಸಂಗತಿಯಾಗಿದೆ.ಈಗಲಾದರೂ ಎಚ್ಚೆತ್ತು ಕೊಂಡು ಅಂಗನವಾಡಿ ಪಕ್ಕದಲ್ಲಿ ಹರಿಯುತ್ತಿರುವ ಕೊಳಕು ಗಲೀಜು ನೀರಿನಿಂದ ಮುಕ್ತಿ ನೀಡಿ ಮಕ್ಕಳಿಗೆ,ಗ್ರಾಮಸ್ಥರಿಗೆ ಅನುಕೂಲ ಮಾಡಿ ಕೊಡುತ್ತಾರೋ ಇಲ್ಲವೋ ಕಾಯ್ದು ನೋಡಬೇಕಾಗಿದೆ.
ವರದಿ:ಮಹಾಂತೇಶ.ಹಾದಿಮನಿ. ವಿಜಯಪುರ