ಮಾನ್ವಿಯಲ್ಲಿ ಸಂಭ್ರಮದಿಂದ ನಡೆದ ಬಕ್ರೀದ್ – ಹಬ್ಬ ಆಚರಣೆ.
ಮಾನ್ವಿ ಜೂ.07

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಈದ್ಗಾ ಮೈದಾನದಲ್ಲಿ ಮುಂಜಾನೆ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಶಾಸಕ ಹಂಪಯ್ಯ ನಾಯಕ ಸೇರಿದಂತೆ ಕಾಂಗ್ರೆಸ್ ಮುಖಂಡರು ಶುಭಾಶಯ ಕೋರಿ ವಿನಿಮಯ ಮಾಡಿ ಕೊಂಡರು.
ನಾವೆಲ್ಲರೂ ಸೌಹರ್ದತೆಯಿಂದ ಬದುಕೋಣ ಎಂದು ರಾಜಾ ಶ್ಯಾಮಸುಂದರ್ ನಾಯಕ ಹಾಗೂ ಜೆಡಿಎಸ್ ತಾಲೂಕಾಧ್ಯಕ್ಷ ಈರಣ್ಣ ಮರ್ಲಟ್ಟಿ ಸೇರಿದಂತೆ ನಾನಾ ಪಕ್ಷದ ಮುಖಂಡರು ಶುಭಾಶಯ ಕೋರಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ