ಈರುಳ್ಳಿ ಬೆಲೆ ಕುಸಿತ ದಿಂದ ಹೈರಾಣಾದ – ರೂಢಗಿ ಗ್ರಾಮದ ರೈತ.
ರೂಡಗಿ ಜೂ.10

ಕರ್ನಾಟಕ ರಾಜ್ಯದಲ್ಲಿಯೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆಯಲ್ಲಿ ಎರಡು ಸ್ಥಾನದಲ್ಲಿ ಇದ್ದ ವಿಜಾಪುರ ಜಿಲ್ಲೆಯಲ್ಲಿ ಮುದ್ದೇಬಿಹಾಳ ತಾಲೂಕಿನ ಸುಮಾರು ಎರಡು ಸಾವಿರ ಎಕರೆ ಪ್ರದೇಶದಲ್ಲಿ ಡಿಸೆಂಬರ್ ತಿಂಗಳಲ್ಲಿ ನಾಟಿ ಮಾಡಿದ್ದ ಈರುಳ್ಳಿ ಬೆಳೆಯನ್ನು ಮಾರ್ಚ್ ದಲ್ಲಿ ರಾಶಿ ಮಾಡಲಾಗಿತ್ತು. ಕೆಲವು ರೈತರು ಆಗಾಗಲೇ ಇದ್ದಂತಹ ಬೆಲೆಗೆ ಕೊಟ್ಟು ಕೈ ತೊಳೆದು ಕೊಂಡರೆ. ಇನ್ನೂ ಕೆಲವು ರೈತರು ಮುಂದೆ ಹೆಚ್ಚಿನ ಬೆಲೆ ಸಿಗಬಹುದು. ಎಂಬ ನಿರೀಕ್ಷೆಯಲ್ಲಿ ಗುಡಿಸಲಗೆ ಸ್ಟಾಕ್ ಮಾಡಿದ್ದರು. ಆದರೆ ಇವಾಗ ಸ್ಟಾಕ್ ಮಾಡಿ ಮೂರು ತಿಂಗಳಾದರೂ ಬೆಲೆ ಸಿಗದೇ ಇದ್ದ ಕಾರಣಕ್ಕೆ ಮುದ್ದೇಬಿಹಾಳ ತಾಲೂಕಿನ ರೂಡಗಿ ಗ್ರಾಮದ ರೈತನೊಬ್ಬ ಬಸವರಾಜ್ ಈಳಗೇರ ಅವನು ತನ್ನ ಆರು ಎಕರೆ ಜಮೀನಿನಲ್ಲಿ ಬೆಳೆದ ಸುಮಾರು 800 ಪಾಕೆಟ ಈರುಳ್ಳಿಯನ್ನು ಸೋಮವಾರ ದಂದು ಜೆ.ಸಿ.ಬಿಯ ಮುಖಾಂತರ ಹೊಲಕ್ಕೆ ಚೆಲ್ಲಿ ತುಂಬಾ ಬೇಸರ ವ್ಯಕ್ತಪಡಿಸಿದರು.
ಪ್ರತಿ ಎಕರೆಗೆ ಈರುಳ್ಳಿ ಬೆಳೆಯನ್ನು ಬೆಳೆಯಲು ಬೀಜ., ಗೊಬ್ಬರ, ಔಷಧಿ, ಕಟಾವು. ಮಾಡುವುದು ಸೇರಿದಂತೆ. ಎಲ್ಲವೂ ಸೇರಿ ಸುಮಾರು 40 ರಿಂದ 60 ಸಾವಿರ ರೂಪಾಯಿ ಖರ್ಚು ಮಾಡಿದ್ದಾನೆ. ಆದರೆ ಈಗಿನ ಬೆಲೆಗೆ ಬೆಂಗಳೂರು ಮಾರುಕಟ್ಟೆಗೆ ಹೋಗಿ ಬರುವ ಗಾಡಿ ಬಾಡಿಗೆ ಕೂಡ ಬರುವುದಿಲ್ಲ. ಎಂದು ರೂಡಗಿ ಗ್ರಾಮದ ರೈತ ಬಸವರಾಜ ಈಳಿಗೇರ ತಾನು ಬೆಳೆದ ಸುಮಾರು 800 ಪಾಕೆಟ್ ಈರುಳ್ಳಿಯನ್ನು ಬದುವಿಗೆ ಹಾಕಿ ಕೇಂದ್ರ ಸರ್ಕಾರ ಕೆಲ ಹೊರ ದೇಶಗಳಿಗೆ ಆಮದು ಮತ್ತು ರಫ್ತು ಬಂದ್ ಮಾಡಿದ್ದರಿಂದ ರೈತರಿಗೆ ಈ ಸಂಕಷ್ಟ ಎದುರಾಗಿದೆ. ರೈತರ ಗೋಳು ಯಾವಾಗಲೂ ಇಷ್ಟೇ ಇದೆ ಉತ್ತಮ ಬೆಲೆ ಇದ್ದರೆ ಬೆಳೆ ಚೆನ್ನಾಗಿ ಬರೋದಿಲ್ಲ ಬೆಳೆ ಚೆನ್ನಾಗಿ ಬಂದರೆ ಬೆಲೆ ಸಿಗುವುದಿಲ್ಲ. ಯಾವ ಸರ್ಕಾರನೂ ರೈತರ ಬಗ್ಗೆ ಯಾವ ಯೋಚನೆ ಮಾಡಲ್ಲ. ಎಲ್ಲರೂ ತಮ್ಮ ಲಾಭಕ್ಕೆ ರಾಜಕೀಯ ಮಾಡ್ತಾರೆ ಎಂದು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ