ಕೆ.ಶಿವನಗೌಡ ನಾಯಕ ಹುಟ್ಟು ಹಬ್ಬವನ್ನು ಕವಿತಾಳದಲ್ಲಿ ಆಚರಿಸಲು ನಿರ್ಧಾರ – ಯಮುನಪ್ಪ.ದಿನ್ನಿ ಕವಿತಾಳ
ಕವಿತಾಳ ಜೂ.10

ರಾಯಚೂರು ಜಿಲ್ಲೆಯ ಸಮಗ್ರ ನೀರಾವರಿಗಾಗಿ ಸಂಕಲ್ಪ ರೈತ ಸಮಾವೇಶದ ಹಾಗೂ ಜಿಲ್ಲೆಗೆ AIIMS ಮುಜುರಾತಿಗಾಗಿ ಹಕ್ಕೊತ್ತಾಯ ಕಾರ್ಯದ ಅಡಿಯಲ್ಲಿ ಹಾಗೂ ಸರಳವಾಗಿ ಹುಟ್ಟು ಹಬ್ಬವನ್ನು ಕವಿತಾಳ ಪಟ್ಟಣದಲ್ಲಿ ಆಚರಿಸಲಾಗುವುದೆಂದು ಯಮನಪ್ಪ.ದಿನ್ನಿ ಹೇಳಿದರು.ಇಂದು ಬುಧವಾರ ಕವಿತಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕೆ.ಶಿವನಗೌಡ ನಾಯಕ್ ಹುಟ್ಟು ಹಬ್ಬದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಜಿಲ್ಲೆಯ ಮಾನ್ವಿ, ಸಿರಿವಾರ ಹಾಗೂ ಮಸ್ಕಿ, ಲಿಂಗಸೂಗುರು (ಭಾಗಶಃ) ಹಾಗೂ ರಾಯಚೂರು ಮತ್ತು ಗ್ರಾಮೀಣ ತಾಲೂಕಿನ ಸಮಗ್ರ ನೀರಾವರಿಗೆ ಮತ್ತು ಅರಿಕೇರಿ ಮತ್ತು ದೇವದುರ್ಗ ತಾಲೂಕಿನ ಅನುಮೋದನೆ ಗೊಂಡಿರುವ 9 ಏತ ನೀರಾವರಿ ಯೋಜನೆಗಳು ಮತ್ತು ಈ ಭಾಗದ ಜೀವನಾಡಿ ತುಂಗಭದ್ರ ಜಲಾಶಯಕ್ಕೆ ಪರ್ಯಾಯವಾಗಿ ನವಲಿ ಸಮಾನಾಂತರ ಜಲಾಶಯಕ್ಕೆ ಹಕ್ಕೋತ್ತಾಯ ಮತ್ತು ತಿಂತಿಣಿ ಬಳಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಜಿಲ್ಲೆಯ ಸಮಗ್ರ ನೀರಾವರಿಗೆ ಹಕ್ಕೂತ್ತಾಯಿಸಿ ಜುಲೈ 14 ರಂದು ಕವಿತಾಳ ಪಟ್ಟಣದಲ್ಲಿ ನಡೆಯುವ ಬೃಹತ್ ರೈತ ಸಮಾವೇಶ ಹಾಗೂ ರಾಯಚೂರು ಜಿಲ್ಲೆಗೆ AIIMS ಮುಜುರಾತಿಗಾಗಿ 4 ನೇ. ವರ್ಷಕ್ಕೆ ಹೋರಾಟ ಪಾದಾರ್ಪಣೆ ಆಗಿದೆ ಪಾದಾರ್ಪಣೆ ಯೊಂದಿಗೆ ಹೋರಾಟ ಮುದುವರೆದಿದ್ದು. ಈ ಸಮವೇಶದಲ್ಲಿ ಹೋರಾಟಕ್ಕೆ ಬೆಂಬಲಿಸಿ ಜಿಲ್ಲೆಯಲ್ಲಿ ರಾಯಚೂರು ಸ್ಥಾಪಿಸಲು ಹಕ್ಕೋತೋಯ ಮಾಡಲಾಗುವುದು.ಇದೇ ದಿನ ನಡೆಯುವ ಸಮಗ್ರ ನೀರಾವರಿಗಾಗಿ ಸಂಕಲ್ಪ ರೈತ ಸಮಾವೇಶದಲ್ಲಿ ನಮ್ಮ ನೆಚ್ಚಿನ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಕೆ.ಶಿವನಗೌಡ ನಾಯಕ ರವರ ಹುಟ್ಟು ಹಬ್ಬವನ್ನು ಸರಳವಾಗಿ ಆಚರಣೆ ಮಾಡಲು ಈ ಸಭೆಯಲ್ಲಿ ತೀರ್ಮಾನಿಸಲಾಯಿತು.ಈ ಸಂಧರ್ಭದಲ್ಲಿ ಕವಿತಾಳ್ ಕೆ.ಎಸ್.ಎನ್ ಸೇವಾ ಸಮಿತಿ ಮುಖಂಡರು ಗಫೂರ ಸಾಬ್, ಈರಣ್ಣ ಕೆಳಗೇರಿ, ಅರಳಪ್ಪ ತೂಪ್ಪದರು, ಎಚ್ ಬಸವರಾಜ್, ಯಲ್ಲಪ್ಪ ಕೊಡ್ಲಿ, ಹನುಮಂತ ಬುಳ್ಳಾಪುರ, ಪ.ಪಂ ಸದಸ್ಯರಾದ ರಮೇಶ್ ನಗನೂರ್, ಯಲ್ಲಪ್ಪ ಮಾಡಿಗೇರಿ, ರಾಘವೇಂದ್ರ ಶೆಟ್ಟಿ, ಮುಖಂಡರಾದ ನೀಲಕಂಠ, ನಿಂಗಣ್ಣ,ಹುಚ್ಚಪ್ಪ ಒಡವಟ್ಟಿ , ನಿಂಗಪ್ಪ ತೋಳದ್ ಗುತ್ತೇದಾರ್, ಅಜಯ್ ಕಲ್ ಶೆಟ್ಟಿ, ದುರಗೇಶ ಯಡವಾಲ್ ಶಿವನಪ್ಪ ದಿನ್ನಿ, ರಮೇಶ ಚಲುವಾದಿ , ಫಕಿರಪ್ಪ, ಹನುಮೇಶ ನಾಯಕ್, ರಮೇಶ ಇರಬಗೇರಿ, ತಾಯಪ್ಪ ಯಾದವ್, ಶಂಕ್ರಪ್ಪ ಭೋವಿ, ಮಹ್ಮದ, ಮೈಹಿಬೂಬ್ ಅರಕೇರಿ, ಮೌನೇಶ ಬುಳ್ಳಾಪುರು ಸೇರಿದಂತೆ ಇತರರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ