ಭೀಮಾ ತೀರದಲ್ಲಿ ಬೆಳಗಿನ ಜಾವ ಭಯಾನಕ – ಮಹಿಳೆಯ ಕೊಲೆ.
ಇಂಡಿ ಜೂ.10

ನಗರದ ಟಿಪ್ಪು ಸುಲ್ತಾನ್ ಸರ್ಕಲ್ ಬಳಿ ಸಂಜು ಬನಸೋಡೆ ಎಂಬ ವ್ಯಕ್ತಿ ರೇಣುಕಾ ಕನ್ನೋಳಿ ಎಂಬ ಮಹಿಳೆಯ ಹೊಟ್ಟೆಗೆ ಕ್ರೂರವಾಗಿ ಚಾಕು ಇರಿದಿದ್ದಾನೆ.ಮಹಿಳೆ ಉಸಿರಾಡುತ್ತಲೇ ಇದ್ದ ಕಾರಣ ಅವರನ್ನು ಪೋಲಿಸರು ಹಾಗೂ ಸರಕಾರಿ ಅಸ್ಪತ್ರೆಯವರು ವಿಜಯಪುರಕ್ಕೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಧ್ಯೆ ರಸ್ತೆಯಲ್ಲಿ ಅವರು ಕೊನೆಯ ಉಸಿರೆಳೆದಳು.
ಕೊಲೆ ಮಾಡಿದ ವ್ಯಕ್ತಿಯನ್ನು ಈಗ ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕೊಲೆ ಯಾಗಿರುವ ಮಹಿಳೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಂಬಂಧಿ ಕೆಲಸ ಮಾಡುತ್ತಿದ್ದವರು ಎಂದು ಹೇಳಲಾಗುತ್ತದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ