ದಲಿತರ ಸಮಸ್ಯೆಗಳಿಗೆ ಸೂಕ್ತ ಕ್ರಮ ವಹಿಸುತ್ತೇನೆ – ಡಿವೈಎಸ್ಪಿ ಹಾಲುಮೂರ್ತಿ ರಾವ್.
ತರೀಕೆರೆ ಜೂ.10

ಅಜ್ಜಂಪುರ ತಾಲೂಕ ಮತ್ತು ತರೀಕೆರೆ ತಾಲೂಕಿನಾದ್ಯಂತ ದಲಿತರ ಸಮಸ್ಯೆಗಳಿಗೆ ಸೂಕ್ತ ಕ್ರಮ ವಹಿಸುತ್ತೇನೆ ಎಂದು ತರೀಕೆರೆ ಪೊಲೀಸ್ ಉಪ ಅಧೀಕ್ಷಕರಾದ ಹಾಲುಮೂರ್ತಿ ರಾವ್ ಹೇಳಿದರು. ಅವರು ಇಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ದಲಿತರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು. ಚೆಲುವಾದಿ ಮಹಾಸಭಾದ ಆಟೋ ಸ್ವಾಮಿ ಮಾತನಾಡಿ ಕೊಡಿ ಕ್ಯಾಂಪ್ನ ಸುಂದರೇಶ್ ಬಡಾವಣೆಯಲ್ಲಿ ಯುವಕರು ಗಾಂಜಾ ಸೇವನೆಗೆ ಬಲಿ ಯಾಗುತ್ತಿದ್ದಾರೆ, ಮಟ್ಕಾ ದಂದೆ ಎಗ್ಗಿಲ್ಲದೆ ನಡೆಯುತ್ತಿದೆ ಪೊಲೀಸ್ ಬಿಟು ವ್ಯವಸ್ಥೆ ಮಾಡಬೇಕು ಎಂದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ ಎನ್.ವೆಂಕಟೇಶ್ ಮಾತನಾಡಿ ಸಿಡುಕನಹಳ್ಳಿ ಗ್ರಾಮದಲ್ಲಿ ದಲಿತರ ಜಮೀನನ್ನು ಅರಣ್ಯ ಇಲಾಖೆಯವರು ನೀಲಿಗಿರಿ ಬೆಳೆದಿದ್ದು ಸದರಿ ಜಮೀನು ದಲಿತರಿಗೆ ಬಿಡಿಸಿ ಕೊಡಬೇಕು, ಪರಭಾರೆ ಪ್ರಕರಣಗಳಲ್ಲಿ ದಲಿತರ ಜಮೀನನ್ನು ಬಿಡಿಸಿ ಕೊಡಬೇಕು, ತರೀಕೆರೆ ಪಟ್ಟಣದ ಸ್ಮಶಾನಕ್ಕೆ ಹೋಗುವ ರಸ್ತೆ ದುರಸ್ತಿ ಮಾಡಿಸಬೇಕು ಎಂದು ಹೇಳಿದರು. ವಕೀಲರಾದ ಚಂದ್ರಪ್ಪ ಮಾತನಾಡಿ ದಲಿತರಿಗೆ ಸ್ಮಶಾನದ ಕೊರತೆ ಇದೆ ಎಂದು ಹೇಳಿದರು. ಸೊಲ್ಲಾಪುರದ ಶಿವಮೂರ್ತಿ, ಗೌರೀಶ, ಮಹೇಂದ್ರ ಸ್ವಾಮಿ, ಓಂಕಾರಪ್ಪ, ಕೃಷ್ಣ ನಾಯ್ಕ ಜಿಟಿ ರಮೇಶ, ದೋರನಾಳು ಸುನಿಲ್, ಬೆಳೆನಹಳ್ಳಿ ಸಿದ್ದಪ್ಪ ಹೆಬ್ಬೂರು ಶಿವಣ್ಣ ಮುಂತಾದ ದಲಿತ ಮುಖಂಡರು ಸಮಸ್ಯೆಗಳ ಬಗ್ಗೆ ಮಾತನಾಡಿದರು. ತಹಶೀಲ್ದಾರ್ ಗ್ರೇಡ್ ಎರಡು ನೂರುಲ್ಲಾ ಉದ್ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್, ವೀರೇಂದ್ರ, ಗಿರೀಶ್ ಅಬಕಾರಿ ನಿರೀಕ್ಷಕರಾದ ಶ್ರೀಕಾಂತ್, ಲೋಕಯೋಗಿ ಇಲಾಖೆಯ ಸಹಾಯಕ ಅಭಿಯಂತರರಾದ ನಾಗೇಂದ್ರಪ್ಪ ತಾಲೂಕು ಪಂಚಾಯಿತಿ ಅಧಿಕಾರಿಯಾದ ವಸಂತಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು