ರೈತರಿಗಾಗಿ ಕೃಷಿ ಇಲಾಖೆಯಿಂದ – ವಿಕಸಿತ ಕಾರ್ಯಕ್ರಮ.
ಢವಳಗಿ ಜೂ.13

ರೈತರು ರಾಸಾಯನಿಕ ಗೊಬ್ಬರವನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡಿ ಸಾವಯವ ಕೃಷಿಯತ್ತ ಗಮನ ಹರಿಸಬೇಕು. ಸಾವಯುವ ಗೊಬ್ಬರ ಬಳಕೆ ಮಾಡಿದರೆ ಬೆಳೆಗಳಿಗೆ ತಗಲುವ ರೋಗಗಳನ್ನು ನಿಯಂತ್ರಣಕ್ಕೆ ತರುವುದರ ಜೋತೆಗೆ ಭೂಮಿಯ ಫಲವತ್ತತೆಯನ್ನು ಕಾಪಾಡಲು ಸಹಾಯಕವಾಗುತ್ತದೆ. ಇದರ ಜೋತೆಗೆ ಉತ್ತಮ ಇಳುವರಿಯ ಬೆಳೆಗಳನ್ನು ಪಡೆಯಬಹುದು ಎಂದು ವಿಜಯಪುರ ಕೃಷಿ (ಮಣ್ಣು ವಿಜ್ಞಾನಿ) ಕೇಂದ್ರದ ವಿಜ್ಞಾನಿಯಾದ ಡಾ, ಶಿವರಾಜ ಕಾಂಬಳೆ ಹೇಳಿದರು. ಢವಳಗಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಸಮೀಪದ ಹಳ್ಳೂರು ಮತ್ತು ಗುಡಿಹಾಳ ಗ್ರಾಮದಲ್ಲಿ ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಮತ್ತು ವಿಜಯಪುರ ಕೃಷಿ ವಿಜ್ಞಾನ ಕೆಂದ್ರ, ಹಾಗೂ ಕೃಷಿ ಇಲಾಖೆ ವಿಜಯಪುರ ಇವರ ಸಹಯೋಗದೊಂದಿಗೆ ಗುರುವಾರ ದಂದು ನಡೆದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು ರೈತರಿಗೆ ಮಾಹಿತಿ ನೀಡಿದರು. ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ, ಎಸ್.ಎಮ್ ವಸ್ತ್ರದ ಅವರು ಮಾತನಾಡಿ ಮೇ 29 ರಂದು ಪ್ರಾರಂಭವಾದ ವಿಕಸಿತ ಅಭಿಯಾನಯು ಜುಲೈ 12 ರ ವರೆಗೆ ನಡೆಯುತ್ತಿದೆ. ತೋಟಗಾರಿಕಾ ಬೆಳೆಗಳಲ್ಲಿ ಇರುವ ನೂತನ ತಂತ್ರಜ್ಞಾನದ ಮಾಹಿತಿಯನ್ನು ನೀಡಿದರು. ಮುಂಗಾರು ಹಂಗಾಮಿಗೆ ಇನ್ನೂಳಿದ ರೈತರು ಅಗತ್ಯ ಸಿದ್ಧತೆಗಳನ್ನು ಮಾಡಿ ಕೊಳ್ಳಬೇಕು. ಉತ್ತಮ ಗುಣಮಟ್ಟದ ಬೀಜಗಳು ಬಿತ್ತನೆ ಮಾಡಿರಿ, ಮತ್ತು ಮುಖ್ಯವಾಗಿ ಕಾಲಕ್ಕೆ ತಕ್ಕಂತೆ ಮಣ್ಣಿನ ಪರೀಕ್ಷೆ ಮಾಡಬೇಕು. ಹಾಗೂ ನೈಸರ್ಗಿಕವಾದ ಕೃಷಿ ಮಾಡುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು.ಢವಳಗಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಯಾದ ಗೋವಿಂದ ರೆಡ್ಡಿ ಮೆದಕಿನಾಳ ಅವರು ಮಾತನಾಡಿ ಕೃಷಿಯಲ್ಲಿ ಸಾವಯವ ಕೃಷಿಯಲ್ಲಿ ಸಾವಯವ ಕೃಷಿಯ ಮಹತ್ವದ ಬಗ್ಗೆ ರೈತರಿಗೆ ಮನವರಿಕೆ ಮಾಡಿ ಕೊಟ್ಟರು. ಪ್ರಮುಖವಾಗಿ ಜೀವಾಮೃತ, ಬೀಜಾಮೃತ, ಪಂಚಗವ್ಯ, ಹಸಿರೆಲೆ ಗೊಬ್ಬರದ ಬಳಕೆ, ಮಣ್ಣು ಪರೀಕ್ಷೆ, ಪರಿಸರ ಸ್ನೇಹಿ ರೋಗ ಮತ್ತು ಕೀಟ ನಿರ್ವಹಣೆ, ಬೀಜೋಪಚಾರದ ಬಗ್ಗೆ ರೈತರಿಗೆ ಮಾಹಿತಿ ತಿಳಿಸಿದರು. ಮತ್ತು ರೇಷ್ಮೆ ಅಧಿಕಾರಿಗಳು ರೇಷ್ಮೆ ಬೆಳೆದ ರೈತರಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ರೈತರ ಆದಾಯ ದ್ವಿಗುಣ ಮಾಡಲು ನೂತನ ತಂತ್ರಜ್ಞಾನಗಳ ಬಳಕೆ ಮತ್ತು ಸಾವಯವ ಕೃಷಿಯ ಅಗತ್ಯ ಇದೆ ಎಂದು ಹೇಳಿದರು. ಇದೇ ವೇಳೆಯಲ್ಲಿ ಆತ್ಮಾ ಯೋಜನೆಯ ತಾಂತ್ರಿಕ ವ್ಯವಸ್ಥಾಪಕರಾದ ಸಂಗಮೇಶ ಸಜ್ಜನ, ಸಂಗನೌಡ ರೆಬನಳ್ಳಿ, ಲೆಕ್ಕ ಸಹಾಯಕರಾದ ಸಂಗಮೇಶ ಚೌದ್ರಿ, ಕೃಷಿ ಸಂಜೀವಿನಿ ವಾಹನ ಚಾಲಕ ಶೇಖಪ್ಪ ಭಜಂತ್ರಿ, ಅನುವುಗಾರರಾದ ಶರಣು ಪಾಟೀಲ, ನಾಗರಾಜ ಹಳಬರ, ಗ್ರಾಮದ ರೈತರು ಇದ್ದರು.