ರಸ್ತೆ ಅಧೋಗತಿ ಗ್ರಾಮಕ್ಕೆ ಬಸ್ ಸೌಲಭ್ಯ ಇಲ್ಲದ ಕಾರಣ – ಬಹುಜನ ಸಂಘರ್ಷ ಸಮಿತಿಯಿಂದ ತಹಸೀಲ್ದಾರ್ ಗೆ ಮನವಿ.
ಮಾನ್ವಿ ಜೂ.13 ಟು

ದೇಶ ಸುಧಾರಣೆ ಯಾಗಿದೆ ಎಂದು ಸರಕಾರ ಹೇಳುತ್ತೆ. ಆದರೆ ಮಾನ್ವಿ ತಾಲೂಕಿನ ಜಾಗೀರಪನ್ನೂರು ಗ್ರಾಮಕ್ಕೆ ಬಸ್ ಸೌಲಭ್ಯ ಎರಡು ತಿಂಗಳಿಂದ ಇಲ್ಲದ ಕಾರಣ ಶಾಲಾ ಕಾಲೇಜು ವಿದ್ಯಾರ್ಥಿಗಳು ರಜೆ ಹಾಕಿರುವುದೇ ದೇಶ ಸುಧಾರಣೆ ನಾ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಜಾಗೀರಪನ್ನೂರು ಗ್ರಾಮದ ರಸ್ತೆ ನೋಡಿದರೆ ಸಾಕು ಯಾವ ರೀತಿ ಇದೆ, ಯಾಕೇ ಇನ್ನೂ ಈ ಗ್ರಾಮಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲವ ಎಂದು ಅರಿವು ಆಗುತ್ತದೆ. ಹೀಗಾಗಿ ಬಹುಜನ ಸಂಘರ್ಷ ಸಮಿತಿ ಪದಾಧಿಕಾರಿಗಳು ರಸ್ತೆ ಸುಧಾರಣೆ ಮಾಡಿ ನಮಗೆ ಬಸ್ ವ್ಯವಸ್ಥೆ ಮಾಡಿ ಎಂದು ತಹಸೀಲ್ದಾರ್ ಗೆ ಮನವಿ ಸಲ್ಲಿಸಿದ್ದಾರೆ.
ಜಾಗೀರಪನ್ನೂರು ಗ್ರಾಮಕ್ಕೆ ಬಸ್ ಸೌಲಭ್ಯ ಇಲ್ಲದ ಕಾರಣ ಜನರು ನಿತ್ಯ ನಡೆದು ಕೊಂಡು ಹಾಗೂ ವಾಹನಗಳನ್ನು ನಿಲ್ಲಿಸಿ ನಾನು ಬರುತ್ತೇನೆಂದು ಸಂಚಾರ ಮಾಡ ಬೇಕಾಗಿದೆ. ಮಹಿಳೆಯರಿಗೆ ಹಾಗೂ ವೃದ್ಧರಿಗೆ ಏನಾದರು ಆರೋಗ್ಯದಲ್ಲಿ ಸಮಸ್ಯೆ ಯಾದರೆ ಸಾವು ಮಾತ್ರ ಗ್ಯಾರಂಟಿ ಎಂದು ಹೋರಾಟಗಾರರ ಕೂಗಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ