ಕುಮಾರ ದಳವಾಯಿ ವಾದ್ಯ ಕಲಾರತ್ನ – ಪ್ರಶಸ್ತಿಗೆ ಆಯ್ಕೆ.
ವಿಜಯಪುರ ಜೂ.14

ಪಟ್ಟಣದಲ್ಲಿ ಜೂನ್ 22 ರವಿವಾರ ರಂದು ಶ್ರೀ ಸಿದ್ದೇಶ್ವರ ದೇವಸ್ಥಾನದ ಹತ್ತಿರ ಶ್ರೀ ಸಿದ್ದೇಶ್ವರ ಕಲಾ ಭವನದಲ್ಲಿ ವಿಶ್ವ ಕನ್ನಡ ಜಾನಪದ ಪರಿಷತ್ ಬೆಂಗಳೂರು ವತಿಯಿಂದ ಹಮ್ಮಿಕೊಂಡ ರಾಷ್ಟ್ರೀಯ ಗುಮ್ಮಟ ಉತ್ಸವ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಮಂಗಸೂಳಿ ಗ್ರಾಮದ ಡೊಳ್ಳಿನ ಕಲಾ ವಾದಕರಾದ ಶ್ರೀಯುತ ಕುಮಾರ ದಳವಾಯಿ ಅವರನ್ನು ಕರ್ನಾಟಕ ಡೊಳ್ಳಿನ ವಾದ್ಯ ಕಲಾ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.