ನಂದಿಬಟ್ಟಲು ಮುರಾರ್ಜಿ ಶಾಲೆಗೆ – ಶಾಸಕ ಜಿ.ಎಚ್ ಶ್ರೀನಿವಾಸ್ ದಿಢೀರ್ ಭೇಟಿ.
ತರೀಕೆರೆ ಜೂ.15

ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡಿರಿ ಎಂದು ಶಾಸಕ ಜಿ.ಎಚ್ ಶ್ರೀನಿವಾಸ್ ಹೇಳಿದರು. ಅವರು ಇಂದು ತಾಲೂಕಿನ ನಂದಿಬಟ್ಟಲು ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಪ್ರಾಂಶುಪಾಲರಾದ ಬಸವರಾಜ್ ತೆಗ್ಗಿ ಮತ್ತು ಶಿಕ್ಷಕರಿಗೆ ಹೇಳಿದರು. ವಾರ್ಡನ್ ಸತೀಶ್ ರವರೊಂದಿಗೆ ಮಾತನಾಡುತ್ತಾ ಮಕ್ಕಳಿಗೆ ಆಹಾರದ ಮೆನು ರೀತಿ ಉತ್ತಮವಾದ ಊಟ ತಿಂಡಿ ನೀಡಬೇಕು ಜೊತೆಗೆ ಮೊಟ್ಟೆ ಹಾಗೂ ಹಾಲು ಮತ್ತು ಚಿಕನ್ ಸಾರು ರುಚಿಕರ ವಾಗಿರಬೇಕು ಎಂದು ಹೇಳಿದರು. ಊಟದಲ್ಲಿ ವ್ಯತ್ಯಾಸವಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು. ಬಾಲಕರ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಕುಂದು ಕೊರತೆಗಳ ಬಗ್ಗೆ ಚರ್ಚೆ ಮಾಡಿ ಶೌಚಾಲಯ ಸ್ವಚ್ಛತೆ ಬಗ್ಗೆ ವೀಕ್ಷಿಸಿ ಶಾಲಾ ವಾತಾವರಣ ತುಂಬಾ ಚೆನ್ನಾಗಿದೆ ಇದನ್ನೇ ಮುಂದುವರಿಸಿರಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ ಎನ್.ವೆಂಕಟೇಶ್ ಉಪಸ್ಥಿತರಿದ್ದು ಶಾಲೆಯ ಮುಂಭಾಗ ದಲ್ಲಿರುವ ಎರಡು ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ಮಾಡಲು ಶಾಸಕರಿಗೆ ಮನವಿ ಮಾಡಿದರು. ಹಾಗೂ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಲಿಂಗದಳ್ಳಿಯ ರವಿ ರವರು ಮಾತನಾಡುತ್ತಾ ಕಲ್ಲತ್ತಿಗಿರಿ ಯಿಂದ ಕುಡಿಯುವ ನೀರಿಗೆ ಸಂಪರ್ಕವನ್ನು ಶಾಲೆಗೆ ಒದಗಿಸಿ ನೀರಿನ ಸಮಸ್ಯೆ ಬಗೆಹರಿಸಲು ತಿಳಿಸಿದರು. ಪ್ರಾಂಶುಪಾಲರಾದ ಬಸವರಾಜ್ ತೆಗ್ಗಿ ರವರು ಶುದ್ಧ ಕುಡಿಯುವ ನೀರಿನ ಘಟಕ ಮಂಜೂರು ಮಾಡಿಸಿ ಕೊಳ್ಳಲು ಶಾಸಕರಲ್ಲಿ ವಿನಂತಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು