ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಆಚರಣೆ.

ಸಾಸಲವಾಡ ಜೂ.15

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಿರೇ ಹೆಗ್ಡಾಳ್ ಗ್ರಾಮದ ವಿಶ್ವ ರಕ್ತ ದಾನಿಗಳ ದಿನಾಚರಣೆ ಪ್ರಯುಕ್ತ ಹಿರೇ ಹೆಗ್ಡಾಳ್ ಗ್ರಾಮದ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ರಕ್ತ ದಾನಿಗಳ ದಿನಾಚರಣೆ ಆಚರಿಸಲಾಯಿತು. ಗ್ರಾಮ ಪಂಚಾಯತಿ ಅಡಿಯಲ್ಲಿ ಬರುವ ಸಾಸಲವಾಡ ಬಪ್ಪಲಾಪುರ ಸಾಣಿಹಳ್ಳಿ ಗ್ರಾಮದವರಿಂದ ಯುವತಿಯರು ಯುವಕರು ಪಾಲ್ಗೊಂಡು ರಕ್ತದಾನ ಮಾಡುವುದರ ಮುಖಾಂತರ ತಮಗೆ ಆಗುವ ಆರೋಗ್ಯದ ಬಗ್ಗೆ ದೇಹದಲ್ಲಿ ಬದಲಾವಣೆ ನಮ್ಮ ರಕ್ತ ಇನ್ನೊಬ್ಬರಿಗೆ ಸಹಕಾರಿ ಯಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ವಿಮಲಾಕ್ಷಿ ಪಂಪಣ್ಣ ಅಧ್ಯಕ್ಷರು ಗ್ರಾಮ ಪಂಚಾಯತಿ ಹಾಗೂ ಮಹೇಶ್ ಎನ್ ಪಿ ಸಮುದಾಯ ಆರೋಗ್ಯ ಅಧಿಕಾರಿಗಳು ಮಹೇಶ್ ಬಿ ಆರೋಗ್ಯ ನಿರೀಕ್ಷಕರು ಅಧಿಕಾರಿಗಳು ಹಾಗೂ ಪ್ರಾಥಮಿಕ ಸುರಕ್ಷಾಧಿಕಾರಿಗಳು ನೇತ್ರಾವತಿ ಎಂ ಆಶಾ ಕಾರ್ಯಕರ್ತೆಯರು ವನಜಾಕ್ಷಿ ಸರಸ್ವತಿ ಗಾಯಿತ್ರಿ ಸೌಭಾಗ್ಯ ಹಾಗೂ ರಕ್ತದಾನಿಗಳಾದ ಯುವಕರು ಬಾಬು ಸುದೀರ ನಾಯಕ ಚಂದ್ರಶೇಖರ ಮನೋಹರ ವಿನುತಾ ಸಾಣಿಹಳ್ಳಿ ಮಲ್ಲನಾಯಕಹಳ್ಳಿ ಚೌಡಪ್ಪ ಕಾಳಿಂಗೇರಿ ಪ್ರದೀಪ್ ಕುಮಾರ್ ಇತರರು ಇದ್ದರು.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button