ಯುವ ಜನಾಂಗ ಸ್ವಾಮಿ ವಿವೇಕಾನಂದರ ಸಮಗ್ರ ಕೃತಿ ಶ್ರೇಣಿಗಳನ್ನು ಅಧ್ಯಯನ ಮಾಡಬೇಕು – ಯುವ ಶಕ್ತಿಗೆ ಮಾತಾಜೀ ತ್ಯಾಗಮಯೀ ಕರೆ.
ಚಳ್ಳಕೆರೆ ಜೂ.15

ಇಂದಿನ ಯುವ ಜನಾಂಗ ಮಹಾತ್ಮ ಗಾಂಧೀಜಿ ಹೇಳಿದಂತೆ ಸ್ವಾಮಿ ವಿವೇಕಾನಂದರ ಸಮಗ್ರ ಕೃತಿ ಶ್ರೇಣಿಗಳನ್ನು ಅಧ್ಯಯನ ಮಾಡಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ “ವಿಶ್ವಗುರು ಸ್ವಾಮಿ ವಿವೇಕಾನಂದ” ಪ್ರವಚನ ಮಾಲಿಕೆಯ ಭಾಗವಾಗಿ ಸ್ವಾಮಿ ವಿವೇಕಾನಂದರ ಕುರಿತು ನಗೇಂದ್ರನಾಥ ಗುಪ್ತ, ಬಾಲಗಂಗಾಧರ ತಿಲಕ್ ಮತ್ತು ಮಹಾತ್ಮ ಗಾಂಧೀಜಿ ಅವರ ಸ್ಮೃತಿಗಳ ಬಗ್ಗೆ ಪ್ರವಚನ ನೀಡುತ್ತ ಅವರು ಆಶೀರ್ವಚನ ನೀಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಬಾಲಗಂಗಾಧರ ತಿಲಕರ ಪಾತ್ರ ಮಹತ್ವದ್ದು, ಅವರ ಮತ್ತು ಸ್ವಾಮಿ ವಿವೇಕಾನಂದರ ಭೇಟಿಯ ಘಟನೆಗಳು ಅತ್ಯಂತ ಸ್ವಾರಸ್ಯಕರವಾಗಿದ್ದು ಅವುಗಳ ಸ್ಮರಣೆ ಅಗತ್ಯವಾದದ್ದು ಎಂದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ ಹಾಗೂ ಆರತಿ ಕಾರ್ಯಕ್ರಮ ನಡೆಯಿತು.

ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಹೂವಿನ ಲಕ್ಷ್ಮೀದೇವಮ್ಮ, ಜಿ.ಯಶೋಧಾ ಪ್ರಕಾಶ್,ಜಗದೀಶ್, ಚೇತನ್, ಸಂಧ್ಯಾ ಸುಧಾಕರ್, ಯತೀಶ್.ಎಂ ಸಿದ್ದಾಪುರ, ನಾಗರಾಜ್, ಉಷಾ ಶ್ರೀನಿವಾಸ್, ಸಂಗೀತ, ಯುಕ್ತ,ರಶ್ಮಿ ವಸಂತ, ಯಶಸ್ವಿ, ವೀಣಾ ಮಂಜುನಾಥ, ಶ್ರೀಪಾದ್, ಸುಮನ ಕೋಟೇಶ್ವರ, ಸಿ.ಎಸ್ ಭಾರತಿ, ಮಂಜುನಾಥ, ಮಂಜುಳ ಉಮೇಶ್, ಚೆನ್ನಕೇಶವ, ಋತಿಕ್ ಸೇರಿದಂತೆ ಸದ್ಭಕ್ತರು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.